
ನಿವೃತ್ತ ಸರ್ಕಾರಿ ನೌಕರರೊಬ್ಬರು ಗೂಳಿಯ ದಾಳಿಯ ನೋವಿನಿಂದ ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ.
ಕೋಟಾದಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ, ವೃದ್ಧರು ಬೆಳಗಿನ ವಾಕಿಂಗ್ಗೆ ತೆರಳಿದ್ದ ವೇಳೆ ಗೂಳಿಯೊಂದು ಏಕಾಏಕಿ ದಾಳಿ ನಡೆಸಿದೆ. ಗೂಳಿಯ ಕೊಂಬುಗಳು ವೃದ್ಧರ ಮುಖಕ್ಕೆ ಅಡ್ಡಲಾಗಿ ಚುಚ್ಚಿವೆ.
ಇದರಿಂದಾಗಿ ದಾಳಿಗೊಳಗಾದ ವೃದ್ಧರ ಕಣ್ಣು ಕೂಡ ಹೊರಬಂದಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಈ ಘಟನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿ ಬೆಚ್ಚಿಬೀಳಿಸಿದೆ.
ಕೋಟಾ ನಗರದ ಸಾಬರಮತಿ ಕಾಲೋನಿಯಲ್ಲಿ ಈ ದುರಂತ ನಡೆದಿದೆ. ಪ್ರಕರಣದಲ್ಲಿ ಸಾವನ್ನಪ್ಪಿದ ಮಹೇಶ್ ಚಂದ್ (62) ಸರ್ಕಾರಿ ಶಾಲೆಯಲ್ಲಿ ನಿವೃತ್ತರಾಗಿದ್ದಾರೆ ಎಂದು ಮೃತರ ಪುತ್ರ ರಘುವೀರ್ ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಆರು ಗಂಟೆ ಸುಮಾರಿಗೆ ಮನೆಯಿಂದ ಬೆಳಗಿನ ವಾಕಿಂಗ್ಗೆ ತೆರಳಿದ್ದರು. ಮನೆಯಿಂದ ಸ್ವಲ್ಪ ದೂರದಲ್ಲಿದ್ದಾಗ ಗೂಳಿಯೊಂದು ಅವರ ಮೇಲೆ ದಾಳಿ ಮಾಡಿತು. ಅವರು ಕೆಳಗೆ ಬಿದ್ದ ನಂತರ ತಂದೆ ಗೂಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೆ ತೀವ್ರವಾಗಿ ಗಾಯಗೊಂಡಿದ್ದರ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ರಘುವೀರ್ ತಿಳಿಸಿದ್ದಾರೆ.