alex Certify ಒಳಉಡುಪು, ಪ್ಯಾಂಟ್ ಸೇರಿ ಸಾಮಾನು ಸರಂಜಾಮುಗಳಲ್ಲಿ ಬಚ್ಚಿಟ್ಟುಕೊಂಡು ತಂದಿದ್ದ 5 ಕೆಜಿ ಚಿನ್ನ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಳಉಡುಪು, ಪ್ಯಾಂಟ್ ಸೇರಿ ಸಾಮಾನು ಸರಂಜಾಮುಗಳಲ್ಲಿ ಬಚ್ಚಿಟ್ಟುಕೊಂಡು ತಂದಿದ್ದ 5 ಕೆಜಿ ಚಿನ್ನ ವಶಕ್ಕೆ

ಕೊಯಮತ್ತೂರು: ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಸೋಮವಾರ 2.94 ಕೋಟಿ ಮೌಲ್ಯದ 5.6 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.

ಸಂಗ್ರಹಿಸಿದ ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ ಡಿಆರ್‌ಐ ಅಧಿಕಾರಿಗಳು ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಆರು ಪ್ರಯಾಣಿಕರನ್ನು ವಶಕ್ಕೆ ಪಡೆದರು.

ಅಕ್ಟೋಬರ್ 3 ರಂದು ಸ್ಕೂಟರ್ ಏರ್‌ಲೈನ್ಸ್ ವಿಮಾನದಲ್ಲಿ ಸಿಂಗಾಪುರದಿಂದ ಕೊಯಮತ್ತೂರಿಗೆ ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳಲ್ಲಿ ಚಿನ್ನವನ್ನು ಬಚ್ಚಿಟ್ಟು ತಂದಿದ್ದರು.

ಪ್ರಯಾಣಿಕರು ತಂದ ಚಿನ್ನವು ಕಚ್ಚಾ ಸರಗಳು ಮತ್ತು ಬಳೆಗಳ ರೂಪದಲ್ಲಿತ್ತು. ಅವರ ಪ್ಯಾಂಟ್ ಪಾಕೆಟ್‌ ಗಳು, ಒಳಉಡುಪು ಮತ್ತು ಸಾಮಾನು ಸರಂಜಾಮುಗಳಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಡಿಆರ್‌ಐ ಅಧಿಕಾರಿಗಳು ಚೆನ್ನೈನ ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದಾರೆ, ಅವರಿಂದ ವಶಪಡಿಸಿಕೊಂಡ ಮೌಲ್ಯ ಒಂದು ಕೋಟಿ ಮೀರಿದೆ. ಜಾಮೀನು ರಹಿತ ಅಪರಾಧ ದಾಖಲಿಸಿ ಕೊಯಮತ್ತೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ತಿರುಚ್ಚಿಯ ಇನ್ನೊಬ್ಬ ಪ್ರಯಾಣಿಕ ಕೃಷ್ಣನ್(66) ನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...