alex Certify ಕೊರೊನಾ ಬೂಸ್ಟರ್​ ಡೋಸ್​ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಡಾ.ಅಶ್ವತ್ಥ ನಾರಾಯಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಬೂಸ್ಟರ್​ ಡೋಸ್​ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಡಾ.ಅಶ್ವತ್ಥ ನಾರಾಯಣ

ದೇಶದಲ್ಲಿ ಕೊರೊನಾ ಲಸಿಕೆಯ 100 ಕೋಟಿ ಡೋಸ್​ ಲಸಿಕೆ ಹಂಚಿಕೆ ಕುರಿತಂತೆ ಐಟಿ, ಬಿಟಿ ಸಚಿವ ಡಾ. ಸಿ. ಅಶ್ವತ್ಥ ನಾರಾಯಣ ಸಂತಸ ವ್ಯಕ್ತಪಡಿಸಿದ್ರು. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಮುಂದುವರಿದ ದೇಶಗಳಲ್ಲಿ ಶೇಕಡಾ 20ರಷ್ಟು ಲಸಿಕೆ ನೀಡಿಲ್ಲ. ಅಂತದ್ರಲ್ಲಿ ನಮ್ಮ ದೇಶ ಮಾಡಿದ ಸಾಧನೆ ನಿಜಕ್ಕೂ ಗಮನಾರ್ಹ ಎಂದು ಹೇಳಿದ್ರು.

ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ದೇಶಕ ಪ್ರೇಮ್

ಕೊರೊನಾ ಮೂರನೇ ಡೋಸ್​ ಲಸಿಕೆ ಕುರಿತಂತೆ ತಜ್ಞರು ಯಾವುದೇ ಶಿಫಾರಸ್ಸನ್ನು ಮಾಡಿಲ್ಲ. ಅಲ್ಲದೇ ದೇಹದಲ್ಲಿ ನ್ಯೂಟ್ರಲೈಸ್​ ಆ್ಯಂಟಿಬಾಡಿಗಳು ಕಡಿಮೆಯಾಗೋದಿಲ್ಲ. ಹೀಗಾಗಿ ಮೂರನೇ ಡೋಸ್​ ಲಸಿಕೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ರು.

ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಮಾಸ್ಕ್​, ವೆಂಟಿಲೇಟರ್​, ಆಮ್ಲಜನಕ, ಬೆಡ್​ಗಳು ಸೇರಿದಂತೆ ಅನೇಕ ಸವಾಲುಗಳು ಇದ್ದವು. ಆದ್ರೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...