alex Certify BIG NEWS: ರೋಗಿಯ ʼಆರೋಗ್ಯʼ ಪರಿಸ್ಥಿತಿ ಹದಗೆಡುವ ಕುರಿತು 16 ಗಂಟೆ ಮೊದಲೇ ಮುನ್ಸೂಚನೆ ನೀಡಲಿದೆ ಡೋಝೀಯ ಎಐ ಆಧರಿತ ʼಅರ್ಲಿ ವಾರ್ನಿಂಗ್ ಸಿಸ್ಟಮ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರೋಗಿಯ ʼಆರೋಗ್ಯʼ ಪರಿಸ್ಥಿತಿ ಹದಗೆಡುವ ಕುರಿತು 16 ಗಂಟೆ ಮೊದಲೇ ಮುನ್ಸೂಚನೆ ನೀಡಲಿದೆ ಡೋಝೀಯ ಎಐ ಆಧರಿತ ʼಅರ್ಲಿ ವಾರ್ನಿಂಗ್ ಸಿಸ್ಟಮ್ʼ

ಭಾರತದ ಹೆಲ್ತ್ ಎಐ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡೋಝೀ ಸಂಸ್ಥೆಯು ಪ್ರಸಿದ್ಧ ಅಂತಾರಾಷ್ಟ್ರೀಯ ಜರ್ನಲ್ ಫ್ರಂಟಿಯರ್ಸ್ ಇನ್ ಮೆಡಿಕಲ್ ಟೆಕ್ನಾಲಜಿಯಲ್ಲಿ ಪ್ರಕಟವಾದ ತನ್ನ ಮಹತ್ವದ ಸಂಶೋಧನಾತ್ಮಕ ಅಧ್ಯಯನ ವರದಿಯನ್ನು ಅನಾವರಣಗೊಳಿಸಿದೆ.

ಈ ಜರ್ನಲ್ ಅನ್ನು ಪ್ರತಿಷ್ಠಿತ ಫ್ರಂಟಿಯರ್ಸ್ ಗ್ರೂಪ್ ಪ್ರಕಟ ಮಾಡುತ್ತದೆ. ಈ ಸಂಶೋಧನಾತ್ಮಕ ಅಧ್ಯಯನವನ್ನು ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ (ಕೆಜಿಎಂಯು) ಸಹೋಯಗದಲ್ಲಿ ನಡೆಸಲಾಗಿದ್ದು, ಭಾರತೀಯ ಟೆರ್ಷರಿ ಕೇರ್ (ಸಂಕೀರ್ಣ ವೈದ್ಯಕೀಯ ಪರಿಸ್ಥಿತಿಗಳಿಗೆ ಸಂಕೀರ್ಣ, ಅತ್ಯಾಧುನಿಕ ಉಪಕರಣವನ್ನು ಬಳಸಿಕೊಂಡು ನೀಡುವ ಚಿಕಿತ್ಸೆ) ವಿಭಾಗದಲ್ಲಿ ಅತ್ಯಂತ ಮಹತ್ವದ, ಅತಿ ದೊಡ್ಡ ಅಧ್ಯಯನಗಳಲ್ಲಿ ಒಂದಾಗಿದೆ.

ಈ ಅಧ್ಯಯನವು ಡೋಝೀಯ ಎಐ ಆಧರಿತ ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್)ನ ಅದ್ಭುತ ಪರಿಣಾಮವನ್ನು ತೋರಿಸಿಕೊಟ್ಟಿದ್ದು, ರೋಗಿಯ ಆರೋಗ್ಯ ಸ್ಥಿತಿ ಹದಗೆಡುವುದನ್ನು 16 ಗಂಟೆಗಳ ಮುಂಚಿತವಾಗಿ ಊಹಿಸುವ ಅರ್ಲಿ ವಾರ್ನಿಂಗ್ ಸಿಸ್ಟಮ್ ನ ಸಾಮರ್ಥ್ಯವನ್ನು ತಿಳಿಸಿಕೊಟ್ಟಿದೆ. ಇದರಿಂದಾಗಿ ಆರೋಗ್ಯ ಸೇವಾ ಸಿಬ್ಬಂದಿಗಳು ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಲು ಮತ್ತು ಆ ಮೂಲಕ ಜೀವಗಳನ್ನು ಉಳಿಸಲು ಅನುವು ಮಾಡಿಕೊಡುತ್ತದೆ.

ಆಸ್ಪತ್ರೆಗಳಲ್ಲಿ 2 ಮಿಲಿಯನ್ ನಷ್ಟು ಹಾಸಿಗೆ ಸೌಲಭ್ಯವನ್ನು ಹೊಂದಿರುವ ಈ ದೇಶದಲ್ಲಿ ಸುಮಾರು 1.9 ಮಿಲಿಯನ್ ನಷ್ಟು ರೋಗಿಗಳು ಜನರಲ್ ವಾರ್ಡ್‌ ಗಳನ್ನು ಅವಲಂಬಿಸಿರುತ್ತಾರೆ. ಅಲ್ಲಿ ಯಾರಾದರೂ ವೇದ್ಯಕೀಯ ಸೇವಾ ಸಿಬ್ಬಂದಿಗಳು ಭೇಟಿ ಕೊಟ್ಟು ರೋಗಿಗಳ ನಿಗಾ ವಹಿಸುವ ಅವಶ್ಯಕತೆ ಇರುತ್ತದೆ. ಡೋಝೀಯ ಎಐ ಆಧರಿತ ರಿಮೋಟ್ ಪೇಷೆಂಟ್ ಮಾನಿಟರಿಂಗ್ ಮತ್ತು ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಈ ಸಮಸ್ಯೆಗೆ ಅತ್ಯುತ್ತಮ ಪರಿಹಾರವನ್ನು ಒದಗಿಸುತ್ತದೆ. ಈ ತಂತ್ರಜ್ಞಾನವು ಆಸ್ಪತ್ರೆಯ ಸಾಮರ್ಥ್ಯದ ಶೇ.95ರಷ್ಟು ಆರೋಗ್ಯ ಸೇವಾ ವ್ಯವಸ್ಥೆಯನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. ಜೊತೆಗೆ ಐಸಿಯು ವೆಚ್ಚದ ಕೇವಲ ಒಂದು ಭಾಗದಲ್ಲಿ ವಿಶ್ವ ದರ್ಜೆಯ ಆರೋಗ್ಯ ಸೇವೆ ಒದಗಿಸುವ ಶಕ್ತಿ ಹೊಂದಿದ್ದು, ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ನಿರಂತರವಾಗಿ ರೋಗಿಗಳ ಆರೋಗ್ಯವನ್ನು ನಿಗಾವಹಿಸುತ್ತದೆ.

ಪ್ರಸ್ತುತ ನಡೆಸಿರುವ ಅಧ್ಯಯನದ ಭಾಗವಾಗಿ ಡೋಝೀ 85,000 ಗಂಟೆಗಳ ಕಾಲ 700 ರೋಗಿಗಳನ್ನು ನಿಗಾ ವಹಿಸಿದೆ ಮತ್ತು ಡೋಝೀಯ ಕಂಟಿನ್ಯೂಯಸ್ ಕಾಂಟಾಕ್ಟ್ ಲೆಸ್ ಪೇಷೆಂಟ್ ಮಾನಿಟರಿಂಗ್ ಮತ್ತು ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಹೇಗೆ ಸಾಂಪ್ರದಾಯಿಕ ಪದ್ಧತಿಗಳನ್ನು ಹೇಗೆ ಕ್ರಾಂತಿಕಾರಕಗೊಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ.

ರೋಗಿಯ ಪರಿಸ್ಥಿತಿ ಹದಗೆಡುವ 16 ಗಂಟೆಗಳ ಮೊದಲೇ ಎಚ್ಚರಿಕೆಯನ್ನು ನೀಡುವ ಮೂಲಕ ಡೋಝೀಯ ಅತ್ಯಾಧುನಿಕ ವ್ಯವಸ್ಥೆಯು ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಲು ಸೂಚನೆ ನೀಡುತ್ತದೆ. ಇದು ಆರೋಗ್ಯ ಉತ್ತಮಗೊಳಿಸಿ ಜೀವ ಉಳಿಸುವುದರ ಜೊತೆಗೆ ಪ್ರತೀ ಸಿಬ್ಬಂದಿಯ ದಿನದಲ್ಲಿ 2.4 ಗಂಟೆಗಳ ಸಮಯವನ್ನು ಉಳಿಸುತ್ತದೆ. ಈ ಸಂಶೋಧನೆಯಲ್ಲಿ ಎಚ್ಚರಿಕೆಯ ತೀವ್ರತೆ, ನಿರ್ದಿಷ್ಟತೆ, ಮೊದಲ ಸೂಚನೆಯಿಂದ ಆರೋಗ್ಯ ಹದಗೆಡುವವರೆಗಿನ ಸರಾಸರಿ ಸಮಯ ಮತ್ತು ಆರೋಗ್ಯ ಸೇವಾ ಸಿಬ್ಬಂದಿಗಳ ಚಟುವಟಿಕೆ ಸೇರಿದಂತೆ ಪ್ರಮುಖ ವಿಚಾರಗಳನ್ನು ವಿಶ್ಲೇಷಣೆ ನಡೆಸಿದ್ದು, ಡೋಝೀಯ ಜೀವ ಉಳಿಸುವ ಸಾಮರ್ಥ್ಯಕ್ಕೆ ಪೂರಕ ಪುರಾವೆಗಳನ್ನು ಒದಗಿಸಿದೆ.

ಭಾರತದ ಅನೇಕ ಆಸ್ಪತ್ರೆಗಳಲ್ಲಿ ನಿರಂತರ ನಿಗಾವಹಿಸುವ ವ್ಯವಸ್ಥೆ ಐಸಿಯುಗಳಿಗೆ ಮಾತ್ರ ಸೀಮಿತವಾಗಿದೆ. ಜನರಲ್ ವಾರ್ಡ್‌ ಗಳಲ್ಲಿ ಈ ಸೇವೆ ಲಭ್ಯ ಇರುವುದಿಲ್ಲ. ಅಲ್ಲಿ ಬಹಳಷ್ಟು ರೋಗಿಗಳಿದ್ದು, ಅಲ್ಲಿರುವ ಬಹುತೇಕ ರೋಗಿಗಳ ಆರೋಗ್ಯ ಹದಗೆಡುವಿಕೆ ಕುರಿತು ತಿಳಿಯುವುದಿಲ್ಲ. ಹೃದಯ ಬಡಿತ, ಉಸಿರಾಟದ ಬಡಿತ ಮತ್ತು ರಕ್ತದೊತ್ತಡದಂತಹ ಪ್ರಮುಖ ಅಂಶಗಳನ್ನು ನಿರಂತರವಾಗಿ ನಿಗಾವಹಿಸುವ ಮೂಲಕ ಡೋಝೀಯ ಇಡಬ್ಲ್ಯೂಎಸ್ ಈ ಸಮಸ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂಬುದನ್ನು ಈ ಅಧ್ಯಯನವು ತೋರಿಸಿ ಕೊಟ್ಟಿದೆ.

ಅಧ್ಯಯನವು ಡೋಝೀಯ ಇಡಬ್ಲ್ಯೂಎಸ್ ಶೇ.67 ರಿಂದ ಶೇ.94ರವರೆಗಿನ ಪ್ರಕರಣಗಳಲ್ಲಿ ರೋಗಿಯ ಆರೋಗ್ಯ ಕ್ಷೀಣವಾಗುವ ಕುರಿತು ಮೊದಲೇ ಸೂಚನೆ ನೀಡಿದೆ ಮತ್ತು ಪರಿಸ್ಥಿತಿ ಗಂಭೀರ ಆಗುವುದಕ್ಕೆ ಮೊದಲೇ ಆರೋಗ್ಯ ಸೇವಾ ಸಿಬ್ಬಂದಿಗಳು ಚಿಕಿತ್ಸೆ ಒದಗಿಸುವಂತೆ ಮಾಡಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಆರೋಗ್ಯ ಹದಗೆಡುವುದನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವ ಈ ವ್ಯವಸ್ಥೆಯು ವಾರ್ಷಿಕವಾಗಿ 21 ಲಕ್ಷ ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಆರೋಗ್ಯ ಸೇವಾ ವೆಚ್ಚವನ್ನು ₹ 6400 ಕೋಟಿಗಳಷ್ಟು ಕಡಿಮೆ ಮಾಡುವ ತಾಕತ್ತು ಹೊಂದಿದೆ.

ಅಧ್ಯಯನದಿಂದ ತಿಳಿದು ಬಂದ ಪ್ರಮುಖ ವಿಚಾರಗಳು:

ಡೋಝೀಯ ಇಡಬ್ಲ್ಯೂಎಸ್ ರೋಗಿಗಳ ಆರೋಗ್ಯ ಹದಗೆಡುವುದನ್ನು ಸುಮಾರು 16 ಗಂಟೆಗಳ ಮುಂಚಿತವಾಗಿ ಸೂಚಿಸುತ್ತದೆ.
ನಿರಂತರ ನಿಗಾ ವಹಿಸುವಿಕೆಯಿಂದ ಆರೋಗ್ಯ ಸೇವಾ ಸಿಬ್ಬಂದಿಗಳು ಶೇ.10ರಷ್ಟು ಸಮಯವನ್ನು ಉಳಿಸಿದ್ದು, ಪ್ರತೀ ದಿನ ಸರಾಸರಿ 2.4 ಗಂಟೆ ಸಮಯ ಉಳಿತಾಯವಾಗಿದೆ.

ಈ ಕುರಿತು ಕೆಜಿಎಂಯುವ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಹಿಮಾಂಶು ದಂಡು ಅವರು, “ಡೋಝೀಯ ವ್ಯವಸ್ಥೆಯು ರೋಗಿಯ ಪರಿಸ್ಥಿತಿ ಹದಗೆಡುವುದನ್ನು ಮೊದಲೇ ಸೂಚಿಸುತ್ತದೆ ಮತ್ತು ನಿರಂತರವಾಗಿ ರೋಗಿಗಳ ನಿಗಾವಹಿಸುತ್ತದೆ. ಭಾರೀ ಸಂಖ್ಯೆಯ ರೋಗಿಗಳಿಗೆ ತಕ್ಕ ಆರೋಗ್ಯ ವ್ಯವಸ್ಥೆ ಒದಗಿಸುವ ಬೇಡಿಕೆಗೆ ಅನುಗುಣವಾಗಿ ಇದು ಉತ್ತಮವಾದ ಮತ್ತು ಕೈಗೆಟುಕುವ ದರದ ಪರಿಹಾರವನ್ನು ಒದಗಿಸುತ್ತದೆ. ರೋಗಿಯ ಆರೋಗ್ಯ ಕ್ಷೀಣವಾಗುವ ಸೂಚನೆಗಳನ್ನು ಮೊದಲೇ ಪತ್ತೆಹಚ್ಚುವ ಸಾಮರ್ಥ್ಯವು ಅವರ ಬದುಕುಳಿಯುವಿಕೆಯ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ” ಎಂದು ಹೇಳಿದರು.

ಪ್ಯಾರಿಸ್-ಸೆಕ್ಲೇ ವಿಶ್ವವಿದ್ಯಾನಿಲಯದ ವಿಶ್ವ-ಪ್ರಸಿದ್ಧ ಇಂಟೆನ್ಸಿವಿಸ್ಟ್ ಮತ್ತು ತುರ್ತು ಚಿಕಿತ್ಸೆ ಪರಿಣಿತರಾದ ಡಾ. ಜೀನ್-ಲೂಯಿಸ್ ಟೆಬೌಲ್ ಅವರು, “ಭಾರತದಲ್ಲಿ ನಾವು ಮಾಡಿರುವ ಈ ಸಾಧನೆಯು ಜಾಗತಿಕ ಮಟ್ಟದಲ್ಲಿ ಆರೋಗ್ಯ ಸೇವಾ ಕ್ಷೇತ್ರವನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ. ಸಮಸ್ಯೆಗಳು ಬೇರೆ ಆಗಿರಬಹುದು, ಆದರೆ ಸಮಾನವಾದ, ಸಮಯೋಚಿತವಾದ ಮತ್ತು ಕೈಗೆಟುಕುವ ದರದ ಚಿಕಿತ್ಸೆಯ ಅಗತ್ಯ ಎಲ್ಲಾ ಕಾಲದಲ್ಲೂ, ಎಲ್ಲಾ ಸ್ಥಳದಲ್ಲೂ ಇದೆ” ಎಂದು ಹೇಳಿದರು.

ಈ ಕುರಿತು ಮಾತನಾಡಿದ ಡೋಝೀಯ ಸಹ ಸಂಸ್ಥಾಪಕ ಮತ್ತು ಸಿಇಓ ಗೌರವ್ ಪರ್ಚಾನಿ ಅವರು, “ನಾವು ಇದುವರೆಗೆ ಏನು ನಂಬಿಕೊಂಡು ಬಂದಿದ್ದೇವೋ ಅದನ್ನು ಈ ಸಂಶೋಧನಾತ್ಮಕ ಅಧ್ಯಯನದ ಫಲಿತಾಂಶಗಳು ದೃಢಪಡಿಸಿವೆ. ಜೊತೆಗೆ ಆರೋಗ್ಯ ಸೇವೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ, ಸುಲಭವಾಗಿಸುವ ಮತ್ತು ಸಮಾನವಾಗಿಸುವ ಈ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ನಾವು ಈ ಮೂಲಕ ಕೇವಲ ಭಾರತದ ಸಮಸ್ಯೆಯನ್ನು ಮಾತ್ರ ಪರಿಹರಿಸುತ್ತಿಲ್ಲ, ಜೊತೆಗೆ ಜಾಗತಿಕ ಆರೋಗ್ಯ ಸೇವಾ ಕ್ಷೇತ್ರಕ್ಕೆ ನೆರವು ಒದಗಿಸುವ ನಿಟ್ಟಿನಲ್ಲಿ ಮುಂದೆ ಹೆಜ್ಜೆ ಇಟ್ಟಿದ್ದೇವೆ” ಎಂದು ಹೇಳಿದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...