alex Certify ಶುಂಠಿ ಸಿಪ್ಪೆಯನ್ನು ಎಸೆಯಬೇಡಿ ಈ ಕೆಲಸಕ್ಕೆ ಬಳಕೆಯಾಗುತ್ತೆ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಂಠಿ ಸಿಪ್ಪೆಯನ್ನು ಎಸೆಯಬೇಡಿ ಈ ಕೆಲಸಕ್ಕೆ ಬಳಕೆಯಾಗುತ್ತೆ ನೋಡಿ

ಶುಂಠಿ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಎಸೆಯುತ್ತೇವೆ. ಆದರೆ ಅದರಲ್ಲೂ ಕೂಡ ಔಷಧೀಯ ಅಂಶಗಳು ಅಡಗಿವೆ. ಹಾಗಾಗಿ ಶುಂಠಿ ಸಿಪ್ಪೆಯನ್ನು ಎಸೆಯುವ ಬದಲು ಈ ಸಮಸ್ಯೆಗಳ ನಿವಾರಣೆಗೆ ಬಳಸಿಕೊಳ್ಳಿ.

*ಇದನ್ನು ಕೆಮ್ಮು ನಿವಾರಣೆಗೆ ಬಳಸಬಹುದು. ಶುಂಠಿ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಅದನ್ನು ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.

*ಇದರಲ್ಲಿ ರಂಜಕ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅದನ್ನು ಎಸೆಯುವ ಬದಲು ಗಿಡಗಳಿಗೆ ಗೊಬ್ಬರವಾಗಿ ಬಳಸಿ. ಇದರಿಂದ ಚೆನ್ನಾಗಿ ಹೂ ಬಿಡುತ್ತದೆ.

*ಕೋಸುಗಡ್ಡೆ, ಹೂಕೋಸು, ಮೂಲಂಗಿ ಮುಂತಾದ ತರಕಾರಿಗಳನ್ನು ಬೇಯಿಸುವಾಗ ತುಂಬಾ ವಾಸನೆ ಬರುತ್ತದೆ. ಈ ವಾಸನೆಯನ್ನು ನಿವಾರಿಸಿ ಅಡುಗೆ ಪರಿಮಳವಾಗಿಸಲು ಶುಂಠಿ ಸಿಪ್ಪೆಯನ್ನು ಸೇರಿಸಿ ಬೇಯಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...