alex Certify ‘ಎನ್ಕೌಂಟರ್’ ಭೀತಿ: ‘ನನ್ನನ್ನು ಶೂಟ್ ಮಾಡಬೇಡಿ’ ಎಂದು ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ಠಾಣೆಗೆ ಬಂದ ಆರೋಪಿ | Viral Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಎನ್ಕೌಂಟರ್’ ಭೀತಿ: ‘ನನ್ನನ್ನು ಶೂಟ್ ಮಾಡಬೇಡಿ’ ಎಂದು ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ಠಾಣೆಗೆ ಬಂದ ಆರೋಪಿ | Viral Video

ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯೊಬ್ಬ ತನ್ನನ್ನು ಎನ್ ಕೌಂಟರ್ ಮಾಡಬಹುದು ಎಂಬ ಭೀತಿಯಿಂದ ‘ನನ್ನನ್ನು ಶೂಟ್ ಮಾಡಬೇಡಿ’ ಎಂದು ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ಪೊಲೀಸ್ ಠಾಣೆಗೆ ಹಾಜರಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಮಂಗಳವಾರದಂದು ಈ ಘಟನೆ ನಡೆದಿದ್ದು, ಅಂಕಿತ್ ವರ್ಮಾ ಎಂಬ ಈ ಆರೋಪಿ ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆ ಎಂಬ ವಿಷಯ ತಿಳಿದ ಬಳಿಕ ಎನ್ಕೌಂಟರ್ ಭೀತಿಯಿಂದ ಈ ರೀತಿ ಬೋರ್ಡ್ ಹಾಕಿಕೊಂಡು ಬಂದು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.

ಆರು ತಿಂಗಳ ಹಿಂದೆ ಅಂಕಿತ್ ವರ್ಮಾ ಮತ್ತಾತನ ಸಹಚರರು ಕಾಲೇಜಿನಿಂದ ಹಿಂದಿರುಗುತ್ತಿದ್ದ ಮಹೋಲಿ ಕೋರಿ ಗ್ರಾಮದ ಅಮರ್ಜಿತ್ ಚೌಹಾನ್ ಎಂಬವರನ್ನು ಅಡ್ಡಗಟ್ಟಿ ಅವರಿಂದ ನಗ, ನಗದು, ಮೊಬೈಲ್ ಫೋನ್ ದೋಚಿದ್ದರು. ಈ ಸಂಬಂಧ ಛಾಪಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಹುಡುಕಾಟ ನಡೆಸಿದ್ದ ಪೊಲೀಸರು ಅವರುಗಳ ಸುಳಿವು ನೀಡಿದವರಿಗೆ 20,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈ ವಿಚಾರ ತಿಳಿದ ಅಂಕಿತ್ ವರ್ಮಾ ಎನ್ಕೌಂಟರ್ ಭೀತಿಯಿಂದ ಈಗ ಪೊಲೀಸರಿಗೆ ಶರಣಾಗಿದ್ದಾನೆ. ಉತ್ತರ ಪ್ರದೇಶದಲ್ಲಿ ಪೊಲೀಸರ ಕುರಿತಂತೆ ಕ್ರಿಮಿನಲ್ ಗಳು ತೀವ್ರ ಭಯ ಭೀತಿಯನ್ನು ಹೊಂದಿದ್ದು, ಈ ಹಿಂದೆಯೂ ಇದೇ ರೀತಿ ಹಲವರು ಶರಣಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...