alex Certify ಮದುವೆ ಡೇಟ್ ಚೇಂಜ್ ಮಾಡ್ಬೇಡ , ಅಷ್ಟೊತ್ತಿಗೆ ನಾನ್ ಬರ್ತೀನಿ : ತರುಣ್ ಮುಂದೆ ನಟ ದರ್ಶನ್ ಹೇಳಿಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಡೇಟ್ ಚೇಂಜ್ ಮಾಡ್ಬೇಡ , ಅಷ್ಟೊತ್ತಿಗೆ ನಾನ್ ಬರ್ತೀನಿ : ತರುಣ್ ಮುಂದೆ ನಟ ದರ್ಶನ್ ಹೇಳಿಕೆ..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಭೇಟಿಗಾಗಿ ನಿರ್ದೇಶಕ ತರುಣ್ ಸುಧೀರ್ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ತರುಣ್ ಸುಧೀರ್ ಸ್ನೇಹಿತರೊಂದಿಗೆ ಆಗಮಿಸಿ ಮದುವೆಯ ಮೊದಲ ಆಮಂತ್ರಣ ನೀಡಿದ್ದಾರೆ. ಕನ್ನಡ ಸಿನಿಮಾದ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ಜನಪ್ರಿಯ ನಟಿ ಸೋನಾಲ್ ಮೊಂತೆರೋ ವಿವಾಹ ಮುಂದಿನ ತಿಂಗಳು ಅಂದರೆ ಆಗಸ್ಟ್ 10ರಂದು ನಡೆಯಲಿದೆ. ಮೊದಲ ಆಮಂತ್ರಣ ಪತ್ರವನ್ನು ದರ್ಶನ್ಗೆ ತರುಣ್ ಸುಧೀರ್ ನೀಡಿದ್ದಾರೆ . ಆಗಸ್ಟ್ 10ರಂದು ತರುಣ್ ಸುಧೀರ್ ಮತ್ತು ಸೋನಾಲ್ ಮೊಂತೆರೋ ವಿವಾಹ ನಡೆಯಲಿದೆ. ಜೈಲಿನ ಪ್ರತ್ಯೇಕ ಕೊಠsಡಿಯಲ್ಲಿ ನಟ ದರ್ಶನ್ರನ್ನು ಭೇಟಿಯಾಗಿದ್ದಾರೆ.

ನಟ ದರ್ಶನ್ ಇಲ್ಲದೆ ಮದುವೆ ಆಗೋದು ಮನಸ್ಸು ಒಪ್ಪುತ್ತಿಲ್ಲ. ಬಿಡುಗಡೆಯಾದ ಬಳಿಕ ಮದುವೆಯಾಗೋಣ ಎಂದು ತರುಣ್ ಸುಧೀರ್ ಅಂದುಕೊಂಡಿದ್ದರಂತೆ. ಆದರೆ ಹಿರಿಯರು ಹೇಳಿದ ಮೇಲೆ ತರುಣ್ ಒಪ್ಪಿಕೊಂಡಿದ್ದಾರಂತೆ. ನಟ ದರ್ಶನ್ ಕೂಡ ತರುಣ್ ಸುಧೀರ್ ಅವರನ್ನು ಕಂಡು ಬಹಳ ಖುಷಿ ಪಟ್ಟಿದ್ದಾರೆ . ಮದುವೆ ಡೇಟ್ ಚೇಂಜ್ ಮಾಡ್ಬೇಡ , ಅಷ್ಟೊತ್ತಿಗೆ ನಾನ್ ಬರ್ತೀನಿ ಎಂದು ತರುಣ್ ಮುಂದೆ ನಟ ದರ್ಶನ್ ಹೇಳಿದ್ದಾರಂತೆ.

ಆಗಸ್ಟ್ 10 ರೊಳಗೆ ನಟ ದರ್ಶನ್ ಬಿಡುಗಡೆಯಾಗುವುದು ನಿಜನಾ ಎಂಬದು ಸದ್ಯಕ್ಕಿರುವ ಪ್ರಶ್ನೆಯಾಗಿದೆ.ಕಾಟೇರಾ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ವಿವಾಹವಾಗುತ್ತಿದ್ದು, ಈ ನಿಟ್ಟಿನಲ್ಲಿ ದರ್ಶನ್ ಗೆ ಮದುವೆ ಆಮಂತ್ರಣ ನೀಡಲೆಂದು ಜೈಲಿಗೆ ಬಂದು ಭೇಟಿಯಾಗಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...