
ಸೊಸೆಯ ಚಿಕಿತ್ಸೆಗಾಗಿ ಕುನ್ನಿದೇವಿ ಬಂಡಾದಿಂದ ಆಸ್ಪತ್ರೆಗೆ ಆಗಮಿಸಿದ್ದರು. ತೀವ್ರ ವಾಗ್ವಾದದ ನಂತರ ಆಕೆಯ ಮಗ ರೋಹಿತ್ ಆಸ್ಪತ್ರೆಯ ಕಿರಿಯ ವೈದ್ಯರ ಹಿಂಸಾತ್ಮಕ ದಾಳಿಗೆ ಗುರಿಯಾದಾಗ ಪರಿಸ್ಥಿತಿ ದುರಂತ ತಿರುವು ಪಡೆದುಕೊಂಡಿತು. ನರಳುತ್ತಿರುವ ತಾಯಿ ಕೈ ಜೋಡಿಸಿ ಹಲ್ಲೆಯನ್ನು ನಿಲ್ಲಿಸಿ ತನ್ನ ಮಗನನ್ನು ರಕ್ಷಿಸುವಂತೆ ವೈದ್ಯರಲ್ಲಿ ಬೇಡಿಕೊಳ್ಳುತ್ತಿರುವ ಹೃದಯ ವಿದ್ರಾವಕ ಕ್ಷಣ ವೀಡಿಯೊದಲ್ಲಿ ಸೆರೆಯಾಗಿದೆ.
ಆಸ್ಪತ್ರೆಯ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ಗಳ ಉಪಸ್ಥಿತಿಯ ಹೊರತಾಗಿಯೂ ಕಿರಿಯ ವೈದ್ಯರು ತಮ್ಮ ಹಿಂಸಾತ್ಮಕ ನಡವಳಿಕೆಯನ್ನು ಮುಂದುವರೆಸಿದರು. ರೋಹಿತ್ ನನ್ನು ಪ್ರತ್ಯೇಕ ಕೋಣೆಯಲ್ಲಿ ಕೂಡಿಟ್ಟು ಇತರರ ಮೊಬೈಲ್ ಗಳನ್ನು ಕಸಿದುಕೊಳ್ಳಲಾಗಿತ್ತು. ವೈರಲ್ ವಿಡಿಯೋ ನೋಡಿದ ಹಲವರು ವೈದ್ಯರ ನಡೆ ಖಂಡಿಸಿದ್ದು ತಾಯಿ ಗೋಳಾಟ ಕಂಡು ಮರುಗಿದ್ದಾರೆ.