alex Certify BREAKING : ದೆಹಲಿ ಸಿಎಂ ಕೇಜ್ರಿವಾಲ್ ಗೆ ತಪ್ಪದ ‘ED’ ಸಂಕಷ್ಟ, 7 ನೇ ಸಮನ್ಸ್ ಜಾರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ದೆಹಲಿ ಸಿಎಂ ಕೇಜ್ರಿವಾಲ್ ಗೆ ತಪ್ಪದ ‘ED’ ಸಂಕಷ್ಟ, 7 ನೇ ಸಮನ್ಸ್ ಜಾರಿ..!

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಗುರುವಾರ ಏಳನೇ ಸಮನ್ಸ್ ಜಾರಿ ಮಾಡಿದೆ. ಫೆಬ್ರವರಿ 26 ರಂದು ವಿಚಾರಣೆಗೆ ಹಾಜರಾಗುವಂತೆ ಏಜೆನ್ಸಿ ಸೂಚನೆ ನೀಡಿದೆ.

ಸಿಎಂ ಕೇಜ್ರಿವಾಲ್ ಅವರಿಗೆ ಮೊದಲ ಸಮನ್ಸ್ ಅನ್ನು ನವೆಂಬರ್ 2, 2023 ರಂದು ಕಳುಹಿಸಲಾಗಿದ್ದು, ಎರಡನೇ ಸಮನ್ಸ್ ಅನ್ನು ಡಿಸೆಂಬರ್ 21, 2023 ಕ್ಕೆ ಕಳುಹಿಸಲಾಗಿದೆ. ಮೂರನೇ ಸಮನ್ಸ್ ಅನ್ನು ಈ ವರ್ಷದ ಜನವರಿ ೩ ಕ್ಕೆ ಕಳುಹಿಸಲಾಗಿದೆ. ನಾಲ್ಕನೇ ಸಮನ್ಸ್ ಅನ್ನು ಜನವರಿ 17 ಕ್ಕೆ ಮತ್ತು ಐದನೇ ಸಮನ್ಸ್ ಅನ್ನು ಫೆಬ್ರವರಿ 2 ಕ್ಕೆ ಕಳುಹಿಸಲಾಗಿದೆ. ಫೆ.19 ರಂದು ಆರನೇ ಸಮನ್ಸ್ ಆಗಿದೆ. ಇದೀಗ ಫೆ.22 ರಂದು ಏಳನೇ ಸಮನ್ಸ್ ಜಾರಿ ಮಾಡಿದೆ.
ಇಡಿ ಸಮನ್ಸ್ ಗೆ ಸಂಬಂಧಿಸಿದಂತೆ ಮೋದಿ ಸರ್ಕಾರವು ತನಗೆ ಕಿರುಕುಳ ನೀಡುತ್ತಿದೆ ಎಂದು ಕೇಜ್ರಿವಾಲ್ ಪದೇ ಪದೇ ಆರೋಪಿಸುತ್ತಿದ್ದಾರೆ. ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಕ್ಷವು ಇಡಿ ಸಮನ್ಸ್ ಅನ್ನು ಕಾನೂನುಬಾಹಿರ ಎಂದು ನಿರಂತರವಾಗಿ ಕರೆಯುತ್ತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...