alex Certify ಶವಾಗಾರದಲ್ಲಿ ಕ್ಲೀನ್ ಮಾಡಲು ಹೋದ ಸಿಬ್ಬಂದಿಗೆ ಅಚ್ಚರಿ: ಮರೆತೇಹೋಗಿದ್ದ ಕಳೇಬರ ಕಂಡು ಗಾಬರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶವಾಗಾರದಲ್ಲಿ ಕ್ಲೀನ್ ಮಾಡಲು ಹೋದ ಸಿಬ್ಬಂದಿಗೆ ಅಚ್ಚರಿ: ಮರೆತೇಹೋಗಿದ್ದ ಕಳೇಬರ ಕಂಡು ಗಾಬರಿ

ಬೆಂಗಳೂರಿನ ಆಸ್ಪತ್ರೆಯೊಂದರ ಶವಗಾರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ತೆರಳಿದವರಿಗೆ ಅಚ್ಚರಿ ಕಾದಿದೆ. ಒಮಿಕ್ರೋನ್ ಆತಂಕದ ಹೊತ್ತಲ್ಲಿ ಮಹಾ ಎಡವಟ್ಟು ಬಯಲಾಗಿದೆ. 15 ತಿಂಗಳ ಬಳಿಕ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ ಬಯಲಾಗಿದೆ. 15 ತಿಂಗಳ ಕಾಲ ಶವಾಗಾರದಲ್ಲಿ ಇಬ್ಬರ ಮೃತದೇಹ ಬಿಟ್ಟು ಸಿಬ್ಬಂದಿ ಮರೆತಿದ್ದ ಘಟನೆ ಬೆಳಕಿಗೆ ಬಂದಿದೆ.

ರಾಜಾಜಿನಗರದ ಇಎಸ್ಐ ಆಸ್ಪತ್ರೆ ಶವಾಗಾರದಲ್ಲಿ 15 ತಿಂಗಳ ಬಳಿಕ ಎರಡು ಮೃತದೇಹಗಳು ಪತ್ತೆಯಾಗಿವೆ. 2020 ರ ಜುಲೈನಲ್ಲಿ ಚಾಮರಾಜಪೇಟೆಯ ದುರ್ಗಾ ಮತ್ತು ಅಗ್ರಹಾರದ ಮುನಿರಾಜು ಮೃತಪಟ್ಟಿದ್ದರು. ಶವಗಾರದಲ್ಲಿ ಇಬ್ಬರ ಮೃತದೇಹವಿಟ್ಟು ಆಸ್ಪತ್ರೆ ಸಿಬ್ಬಂದಿ ಮರೆತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸಿಬ್ಬಂದಿ ಶವಗಳನ್ನು ಹೊರ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹಗಳನ್ನು ಶಿಫ್ಟ್ ಮಾಡಲಾಗಿದೆ.

ಶವಕ್ಕೆ ಕಟ್ಟಿದ್ದ ಟ್ಯಾಗ್ ಗಳಿಂದ ಗುರುತು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು. ಈಗ ಮೃತದೇಹಗಳನ್ನು ಸ್ವೀಕರಿಸಲು ಕುಟುಂಬದ ಸದಸ್ಯರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...