alex Certify ದಾಳಿ ಮಾಡಿದ ಚಿರತೆಯನ್ನೇ ಕೊಂಬಿನಿಂದ ತಿವಿದು ಮಾಲೀಕನ ರಕ್ಷಿಸಿದ ಹಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಳಿ ಮಾಡಿದ ಚಿರತೆಯನ್ನೇ ಕೊಂಬಿನಿಂದ ತಿವಿದು ಮಾಲೀಕನ ರಕ್ಷಿಸಿದ ಹಸು

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿ ಕೊಡಕಿಕೆರೆ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿದ ಚಿರತೆಯನ್ನು ಹಸು ಕೊಂಬಿನಿಂದ ತಿವಿದು ಓಡಿಸಿ ಮಾಲೀಕನನ್ನು ರಕ್ಷಿಸಿದೆ.

ಬುಧವಾರ ಬೆಳಗ್ಗೆ ಕೊಡಕಿಕೆರೆ ಗ್ರಾಮದ ಕರಿಹಾಲಪ್ಪ(58) ಚಿರತೆ ದಾಳಿಗೆ ಸಿಲುಕಿ ಜೀವ ಉಳಿಸಿಕೊಂಡಿದ್ದಾರೆ. ತೋಟದಲ್ಲಿ ಹಸು ಮೇಯಿಸಲು ಬಂದಿದ್ದ ವೇಳೆ ಅವರ ಮೇಲೆ ಚಿರತೆ ದಾಳಿ ಮಾಡಿದೆ. ಕರಿಹಾಲಪ್ಪನವರ ಮೇಲೆ ಎಗರಿದ ಚಿರತೆ ಪರಚಿ ಗಾಯಗೊಳಿಸಿದೆ. ಸಮೀಪದಲ್ಲಿಯೇ ಮೇಯುತಿದ್ದ ಹಸು ಕೂಡಲೇ ಕೊಂಬಿನಿಂದ ಚಿರತೆಗೆ ತಿವಿದು ಕಾಲಿನಿಂದ ತುಳಿದಿದೆ. ಇದರಿಂದ ಬೆದರಿದ ಚಿರತೆ ಅಲ್ಲಿಂದ ಪರಾರಿಯಾಗಿದ್ದು, ಬೆನ್ನಿಗೆ ಗಾಯಗಳಾಗಿರುವ ಕರಿಹಾಲಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se