
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ4 ಆರೋಪಿ ರಘು ತಾಯಿ ಮಂಜುಳಮ್ಮ(70) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಕೋಳಿಬುರುಜನಹಟ್ಟಿ ಗ್ರಾಮದ ಮನೆಯಲ್ಲಿ ಮಂಜುಳಮ್ಮ ನಿಧನರಾಗಿದ್ದಾರೆ. ಕಳೆದು ಒಂದು ವರ್ಷದಿಂದ ಮಂಜುಳಮ್ಮ ಅನಾರೋಗ್ಯದಿಂದ ಬಳಲುತ್ತಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರಘು ಅಲಿಯಾಸ್ ರಾಘವೇಂದ್ರ ಎ4 ಆರೋಪಿಯಾಗಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈತ ನಟ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷನಾಗಿದ್ದು, ಅಂತ್ಯಸಂಸ್ಕಾರಕ್ಕೆ ಪುತ್ರ ರಘುನನ್ನು ಕರೆತರುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.