alex Certify ದರ್ಶನ್, ಸಹಚರರಿಂದ ಹತ್ಯೆಯಾದ ರೇಣುಕಾ ಸ್ವಾಮಿ ನಿವಾಸಕ್ಕೆ ಭಾವನಾ ಬೆಳಗೆರೆ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದರ್ಶನ್, ಸಹಚರರಿಂದ ಹತ್ಯೆಯಾದ ರೇಣುಕಾ ಸ್ವಾಮಿ ನಿವಾಸಕ್ಕೆ ಭಾವನಾ ಬೆಳಗೆರೆ ಭೇಟಿ

ಚಿತ್ರದುರ್ಗ: ನಟ ದರ್ಶನ್ ತೂಗುದೀಪ ಮತ್ತು ಸಹಚರರಿಂದ ಹತ್ಯೆಯಾಗಿದ್ದಾರೆ ಎನ್ನಲಾದ ಚಿತ್ರದುರ್ಗದ ರೇಣುಕಾ ಸ್ವಾಮಿ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಬಾವನಾ ಬೆಳಗೆರೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ ಭಾವನ ಬೆಳಗೆರೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಕರಣ ಅತ್ಯಂತ ಹೇಯ ಕೃತ್ಯವಾಗಿದೆ. ಯಾವ ಅಭಿಮಾನವೂ ಸಾವು ಬಯಸುವುದಿಲ್ಲ. ದರ್ಶನ್ ಒಂದೊಮ್ಮೆ ಕೊಲೆ ಮಾಡಿಸಿದ್ದಲ್ಲಿ ಶೀಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ರೇಣುಕಾ ಸ್ವಾಮಿ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದಾರೆ. ಅವರಿಗೆ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಅಲ್ಲದೆ ಅವರ ಮನೆಯಲ್ಲಿ ಇಬ್ಬರು ವಯೋವೃದ್ಧೆಯರಿದ್ದಾರೆ. ಮೊಮ್ಮಗ ಗುಣಮುಖನಾಗಿ ಬರುತ್ತಾನೆ ಎನ್ನುತ್ತಿದ್ದಾರೆ. ಪ್ರಕರಣದ ಬಗ್ಗೆ ಇಬ್ಬರು ಅಜ್ಜಿಯರಿಗೆ ಏನು ಗೊತ್ತಾಗಿಲ್ಲ ಎಂದು ತಿಳಿಸಿದ್ದಾರೆ.

ರೇಣುಕಾ ಸ್ವಾಮಿ ತುಂಬಾ ಅಮಾಯಕ. ಇಂತಹ ಖಾಸಗಿ ಕಾಮೆಂಟ್ ಗಳು ಪ್ರತಿದಿನವೂ ಬರುತ್ತಲೇ ಇರುತ್ತವೆ. ಸೈಬರ್ ಕ್ರೈಂ ವಿಭಾಗಕ್ಕೆ ದೂರು ಕೊಡಬಹುದಿತ್ತು. ಕಾನೂನು ಕೈಗೆ ತೆಗೆದುಕೊಳ್ಳಬಾರದು. ಜಾಲತಾಣದಿಂದ ಕೊಲೆಯೇ ಆಗಿದೆ. ಸ್ಟಾರ್ ಗಿರಿ ಎಂಥ ವಿಷಯವನ್ನು ಯಾವ ಮಟ್ಟಿಗೆ ತೆಗೆದುಕೊಂಡು ಹೋಗಿದೆ. ತಪ್ಪು ಮಾಡಿದ್ದಲ್ಲಿ ಖಂಡಿತ ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...