alex Certify ಸಂಪ್ ನಲ್ಲೇ ಕಾದಿತ್ತು ದುರ್ವಿಧಿ: ವಿದ್ಯುತ್ ಪ್ರವಹಿಸಿ ತಂದೆ, ಮಗ ದಾರುಣ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಪ್ ನಲ್ಲೇ ಕಾದಿತ್ತು ದುರ್ವಿಧಿ: ವಿದ್ಯುತ್ ಪ್ರವಹಿಸಿ ತಂದೆ, ಮಗ ದಾರುಣ ಸಾವು

 

ಸಾವು ಎಲ್ಲಿ, ಹೇಗೆ ಬರುತ್ತದೆ ಎಂದು ಯಾರಿಗೂ ಗೊತ್ತಿಲ್ಲಾ.‌ ಆದರೆ ಇಂತಾ ಸಾವು ಯಾರಿಗು ಬೇಡ ಅನ್ನೋವಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.‌ ಈ ದುರ್ಘಟನೆಯಲ್ಲಿ ಅಪ್ಪ, ಮಗ ಇಬ್ಬರು ಮೃತಪಟ್ಟಿದ್ದಾರೆ. ಸಂಪ್ ಕ್ಲೀನ್ ಮಾಡಲು ಹೋಗಿ, ಸಂಪ್ ನಲ್ಲಿದ್ದ ವಿದ್ಯುತ್ ಚಾಲಿತ ಮೋಟಾರ್ ನಿಂದ ಕರೆಂಟ್ ಶಾಕ್ ಹೊಡೆದು ತಂದೆ ಮಗ ಸಾವನ್ನಪ್ಪಿದ್ದಾರೆ. ಆರ್.ಟಿ.ನಗರದ ಸುಲ್ತಾನ್ ಪಾಳ್ಯ ಬಳಿಯ ರಾಮಕೃಷ್ಣ ಅಪಾರ್ಟ್ ಮೆಂಟ್ ನಲ್ಲಿ ಬೆಳಗ್ಗೆ 8 ಗಂಟೆಗೆ ದುರ್ಘಟನೆ ಸಂಭವಿಸಿದೆ. 36 ವರ್ಷದ ತಂದೆ ರಾಜು ಹಾಗೂ ಅವರ ಮಗ 10 ವರ್ಷದ ಸೈನತ್ ಸಾವನ್ನಪ್ಪಿದ್ದಾರೆ.

ಬೆಚ್ಚಿಬೀಳಿಸುವಂತಿದೆ ತಾಲಿಬಾನಿಗಳು ಪತ್ರಕರ್ತರಿಗೆ ನೀಡಿದ ಶಿಕ್ಷೆ

ಆರ್.ಟಿ.ನಗರದ ಸುಲ್ತಾನ್ ಪಾಳ್ಯ ಬಳಿಯ ರಾಮಕೃಷ್ಣ ಅಪಾರ್ಟ್ ಮೆಂಟ್ ನ ಸಂಪ್ ಕ್ಲೀನ್ ಮಾಡೋಕೆ ಬಂದಿದ್ದ ರಾಜುವಿಗೆ ಕರೆಂಟ್ ಶಾಕ್ ಹೊಡೆದಿದೆ. ಈ ವೇಳೆ ಶಾಕ್ ಹೊಡೆದ ರಭಸಕ್ಕೆ‌ ರಾಜು ಜೋರಾಗಿ ಚೀರಾಡಿದ್ದಾರೆ. ಅಪ್ಪನ ಚೀರಾಟದ ಶಬ್ದ ಕೇಳಿದ ಸೈನತ್ ಸಂಪ್ ಬಳಿ ಓಡಿಬಂದಿದ್ದಾನೆ. ಈ ವೇಳೆ ಮಗುವಿಗೂ ಕರೆಂಟ್ ಹೊಡೆದಿದೆ. ಅಪ್ಪ-ಮಗ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...