alex Certify ಪಟಾಕಿಗೆ ‘ಹಸಿರು’ ನಿಶಾನೆ ಆದೇಶವೇ ಅರ್ಥಹೀನ: ನಾಳೆಯೊಳಗೆ ಸ್ಪಷ್ಟನೆ ನೀಡಲು ಹೈಕೋರ್ಟ್ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಟಾಕಿಗೆ ‘ಹಸಿರು’ ನಿಶಾನೆ ಆದೇಶವೇ ಅರ್ಥಹೀನ: ನಾಳೆಯೊಳಗೆ ಸ್ಪಷ್ಟನೆ ನೀಡಲು ಹೈಕೋರ್ಟ್ ಸೂಚನೆ

ಬೆಂಗಳೂರು: ಎಲ್ಲಾ ಬಗೆಯ ಪಟಾಕಿಗಳನ್ನು ನಿರ್ಬಂಧಿಸಬೇಕೆಂದು ಕೋರಿ ಸಲ್ಲಿಕೆಯಾಗಿರುವ ಪಿಐಎಲ್ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಸಲಾಗಿದೆ.

ನವೆಂಬರ್ 6, ನವೆಂಬರ್ 10 ರ ಸರ್ಕಾರದ ಆದೇಶದಲ್ಲಿ ಹಸಿರು ಪಟಾಕಿ ಬಗ್ಗೆ ಸರ್ಕಾರ ಸ್ಪಷ್ಟಪಡಿಸದೇ ಆದೇಶ ನೀಡಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಹೊರಡಿಸಿದ ಆದೇಶವೇ ಅರ್ಥಹೀನವಾಗಿದೆ. ಹಸಿರು ಪಟಾಕಿ ಎಂದರೆ ಏನೆಂಬುದನ್ನು ಸರ್ಕಾರ ತಿಳಿಸಿಲ್ಲ. ಹಸಿರು ಪಟಾಕಿ ಯಾವುದೆಂಬುದನ್ನು ಜನರೇ ನಿರ್ಧರಿಸಬೇಕೆ? ಎಂದು ಪ್ರಶ್ನಿಸಲಾಗಿದೆ.

ಪಟಾಕಿಗಳಿಂದ ಹೆಚ್ಚಿನ ವಾಯುಮಾಲಿನ್ಯ ಉಂಟಾಗುತ್ತದೆ. ವಾಯುಮಾಲಿನ್ಯ ಕೊರೋನಾ ಹರಡಲು ಕಾರಣವಾಗಬಹುದು. ಮೊದಲೇ ಅರ್ಜಿ ಸಲ್ಲಿಸಿದರೆ ಕಠಿಣ ಆದೇಶ ಹೊರಡಿಸುತ್ತಿದ್ದೆವು. ಸಮರ್ಪಕ ಕ್ರಮಕೈಗೊಳ್ಳದಿದ್ದರೆ ಪಟಾಕಿ ಸಿಡಿಸಲು ನಿರ್ಬಂಧ ಹೇರುವುದಾಗಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್, ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಎಚ್ಚರಿಕೆ ನೀಡಿದೆ. ದೀಪಾವಳಿ ವೇಳೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನಿಸಿ ನಾಳೆಯೊಳಗೆ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ತಾಕೀತು ಮಾಡಿದ್ದು, ನಾಳೆ ಬೆಳಗ್ಗೆ 10.30 ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...