
ಕಳೆದ ವರ್ಷ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕಾನ್ಸ್ಟೇಬಲ್ ಶೈಲೇಂದ್ರ ಪ್ರತಾಪ್ ಸಿಂಗ್ ಹುತಾತ್ಮಗಾಗಿದ್ದರು. ಅವರನ್ನು ಸಿಆರ್ಪಿಎಫ್ನ 110ನೇ ಬೆಟಾಲಿಯನ್ಗೆ ನಿಯೋಜಿಸಲಾಗಿತ್ತು. ಗೌರವ ಸೂಚಕವಾಗಿ ಮತ್ತು ಹುತಾತ್ಮ ಯೋಧನ ಸ್ಮರಣೆಗಾಗಿ ಅವರ ಸಹೋದ್ಯೋಗಿಗಳು ಸೋಮವಾರ, ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಅವರ ಸಹೋದರಿ ಜ್ಯೋತಿ ಅವರ ವಿವಾಹಕ್ಕೆ ಆಗಮಿಸಿದ್ದಾರೆ.
ಸಿಪಿಆರ್ಎಫ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಫೋಟೋದಲ್ಲಿ, ಜವಾನರು ಮದುವೆಯ ಸಂಪ್ರದಾಯಗಳನ್ನು ನಿರ್ವಹಿಸುತ್ತಿರುವುದನ್ನು ನೋಡಬಹುದು. ಹುತಾತ್ಮನ ಸಹೋದರಿಗೆ ಸ್ವಂತ ಅಣ್ಣಂದಿರಂತೆ ವೇದಿಕೆಗೆ ಕರೆದೊಯ್ದಿದ್ದಾರೆ. ಬಳಿಕ ಕುಟುಂಬ ಸದಸ್ಯರು ಮತ್ತು ಅತಿಥಿಗಳೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ.
ಹಿರಿಯ ಸಹೋದರರಂತೆ, ಸಿಪಿಆರ್ಎಫ್ ಸಿಬ್ಬಂದಿ ಸಿಟಿ ಶೈಲೇಂದ್ರ ಪ್ರತಾಪ್ ಸಿಂಗ್ ಅವರ ಸಹೋದರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. 110 ಬಿಎನ್ ಸಿಆರ್ಪಿಎಫ್ ನ ಸಿಟಿ ಸಹಿಲೇಂದ್ರ ಪ್ರತಾಪ್ ಸಿಂಗ್ ಅವರು 05/10/20 ರಂದು ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯನ್ನು ಧೈರ್ಯದಿಂದ ಎದುರಿಸುವಾಗ ಹುತಾತ್ಮರಾಗಿದ್ದಾರೆ ಎಂದು ಸಿಆರ್ಪಿಎಫ್ ಟ್ವೀಟ್ ಮಾಡಿದೆ.
ಫೋಟೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯೋಧರಿಗೆ ಸೆಲ್ಯೂಟ್ ಮಾಡಿದ್ದಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ನಮನಗಳು, ನಮ್ಮ ಯೋಧರ ಬಗ್ಗೆ ಹೆಮ್ಮೆಯಿದೆ ಎಂದೆಲ್ಲಾ ಟ್ವೀಟ್ ಮಾಡಿದ್ದಾರೆ.
2020ರ ಅಕ್ಟೋಬರ್ನಲ್ಲಿ ಶ್ರೀನಗರದ ಹೊರವಲಯದಲ್ಲಿರುವ ಹೆದ್ದಾರಿಯಲ್ಲಿ ಸಿಆರ್ಪಿಎಫ್ ಯೋಧರು ಪ್ರಯಾಣಿಸುತ್ತಿದ್ದಾಗ ಪುಲ್ವಾಮಾ ದಾಳಿ ನಡೆದಿತ್ತು. ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಐವರು ಗಾಯಗೊಂಡಿದ್ದರು.