alex Certify ಇಬ್ಬರು ಉಪ ಮುಖ್ಯಮಂತ್ರಿಗಳು ಹಾಗೂ ಮೂವರು ಸಚಿವರಿಗೆ ಕೊರೊನಾ ಧೃಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಬ್ಬರು ಉಪ ಮುಖ್ಯಮಂತ್ರಿಗಳು ಹಾಗೂ ಮೂವರು ಸಚಿವರಿಗೆ ಕೊರೊನಾ ಧೃಡ..!

Covid scare: In Bihar, two deputy CMs, three ministers found infected |  Latest News India - Hindustan Timesಬಿಹಾರದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದೆ. ಬಿಹಾರದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು ಹಾಗೂ ಮೂವರು ಸಚಿವರಿಗೆ ಕೊರೊನಾ ಸೋಂಕು ತಗುಲಿದೆ. ಇಂದು ರಾಜ್ಯ ಸಚಿವ ಸಂಪುಟ ಸಭೆಗೂ ಮುನ್ನ ಈ ಮಾಹಿತಿ ಹೊರಬಿದ್ದಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಬಿಹಾರ ಸರ್ಕಾರವು ನಿನ್ನೆ ನೈಟ್​ ಕರ್ಫ್ಯೂ ಆದೇಶವನ್ನು ಜಾರಿ ಮಾಡಿತ್ತು. ಈ ಆದೇಶದ ಪ್ರಕಾರ ಇಂದಿನಿಂದ ಜನವರಿ 21ರವರೆಗೆ ಬಿಹಾರದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್​ ಕರ್ಫ್ಯೂ ಇರಲಿದೆ. ಎಲ್ಲಾ ಶಾಪಿಂಗ್​ ಮಾಲ್​ಗಳು, ಸಿನಿಮಾ ಹಾಲ್​ಗಳು, ಪಾರ್ಕ್​ಗಳು, ಜಿಮ್​ಗಳು ಈ ಅವಧಿಯಲ್ಲಿ ಬಂದ್​ ಇರಲಿವೆ ಎಂದು ಬಿಹಾರ ಸರ್ಕಾರ ಹೇಳಿದೆ.

ಸೋಮವಾರ ರಾತ್ರಿ ಬಿಹಾರ ಸಿಎಂ ನಿತೀಶ್​ ಕುಮಾರ್​ ಭಾಗಿಯಾಗಿದ್ದ ಸಾಪ್ತಾಹಿಕ ಜನತಾ ದರ್ಬಾರ್​ ಕಾರ್ಯಕ್ರಮದಲ್ಲಿದ್ದ ಒಟ್ಟ ಆರು ಮಂದಿ ಸಂದರ್ಶಕರಿಗೆ ಕೊರೊನಾ ಸೋಂಕು ತಗುಲಿದೆ. ಸಿಎಂ ಗೃಹ ಕಚೇರಿಯ ಅಡುಗೆ ಸಿಬ್ಬಂದಿಗೂ ಕೋವಿಡ್​ ಸೋಂಕು ಧೃಡಪಟ್ಟಿದೆ.

ಇಬ್ಬರು ಉಪಮುಖ್ಯಮಂತ್ರಿಗಳಾದ ತಾರಕಿಶೋರ್​ ಪ್ರಸಾದ್​ ಹಾಗೂ ರೇಣು ದೇವಿ ಮತ್ತು ಸಚಿವರಾದ ಅಶೋಕ್​ ಚೌಧರಿ, ಸುನೀಲ್​ ಕುಮಾರ್​ ಹಾಗೂ ಸಂತೋಷ್​ ಮಾಂಜಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ನಿನ್ನೆಯಷ್ಟೇ ಜೆಡಿ(ಯು) ರಾಷ್ಟ್ರಾಧ್ಯಕ್ಷ ರಾಜೀವ್​ ರಂಜನ್​ ಸಿಂಗ್​ ಅಲಿಯಾಸ್​ ಲಲನ್​ ಸಿಂಗ್​ ಹಾಗೂ ಬಿಹಾರ ಮಾಜಿ ಸಿಎಂ ಜಿತನ್​ ರಾಮ್​ ಮಾಂಜಿಗೂ ಕೊರೊನಾ ಸೋಂಕು ಧೃಡಪಟ್ಟಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...