alex Certify BIG NEWS: ಮತ್ತೆ ತೂಗುಯ್ಯಾಲೆಯಲ್ಲಿ ಶಾಲೆಗಳ ಭವಿಷ್ಯ –ಹೈಸ್ಪೀಡ್ ಕೊರೋನಾ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮತ್ತೆ ತೂಗುಯ್ಯಾಲೆಯಲ್ಲಿ ಶಾಲೆಗಳ ಭವಿಷ್ಯ –ಹೈಸ್ಪೀಡ್ ಕೊರೋನಾ ಆತಂಕ

ಬೆಂಗಳೂರು: ಜನವರಿ 1 ರಿಂದ ಆಯ್ದ ತರಗತಿಗಳು ಆರಂಭ ಮತ್ತು ವಿದ್ಯಾಗಮ ಯೋಜನೆಯಡಿ ಶಾಲೆಗಳ ಆವರಣದಲ್ಲಿ ತರಗತಿ ನಡೆಸಲು ಸರ್ಕಾರ ಮುಂದಾಗಿದೆ.

ಇದೇ ವೇಳೆ ಕೊರೋನಾ ಎರಡನೇ ಅಲೆ ಆತಂಕ ಜೊತೆಗೆ ಅತಿವೇಗದಲ್ಲಿ ಹರಡುವ ಹೊಸ ಕೊರೋನಾ ವೈರಸ್ ಆತಂಕವೂ ಹೆಚ್ಚಿದೆ. ಹಿನ್ನೆಲೆಯಲ್ಲಿ ಶಾಲೆ ಆರಂಭದ ಬಗ್ಗೆ ಮತ್ತೆ ಪರಾಮರ್ಶೆ ನಡೆಸಲಾಗುವುದು ಎನ್ನಲಾಗಿದೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಕೊರೋನಾ ಹೊಸ ಪ್ರಭೇದದ ರಾಜ್ಯದಲ್ಲಿ ಪತ್ತೆಯಾಗಿಲ್ಲ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಹೊಸ ಕೊರೋನಾ ಪ್ರಭೇದ ಪತ್ತೆಯಾದರೆ ಜನವರಿ 1 ರಿಂದ ಶಾಲೆ ಆರಂಭಿಸುವ ಕುರಿತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಮತ್ತೊಮ್ಮೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

ಹೊಸ ಪ್ರಭೇದದ ವೈರಸ್ ಅತಿ ವೇಗವಾಗಿ ಹರಡುತ್ತಿರುವ ಕಾರಣದಿಂದ ಶಾಲೆ ಆರಂಭದ ಬಗ್ಗೆ ಮತ್ತೆ ಪರಾಮರ್ಶೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...