alex Certify ಭೂಕಬಳಿಕೆ ಮಾಡಿದ ಸಚಿವಗೆ ಬಿಗ್ ಶಾಕ್: ಖಾತೆ ಕಸಿದುಕೊಂಡ ಸಿಎಂ ಕೆಸಿಆರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಕಬಳಿಕೆ ಮಾಡಿದ ಸಚಿವಗೆ ಬಿಗ್ ಶಾಕ್: ಖಾತೆ ಕಸಿದುಕೊಂಡ ಸಿಎಂ ಕೆಸಿಆರ್

ಹೈದರಾಬಾದ್: ರೈತರ ಜಮೀನು ಬಲವಂತವಾಗಿ ಕಸಿದುಕೊಂಡ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರ ಖಾತೆಯನ್ನು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಹಿಂಡೆದುಕೊಂಡಿದ್ದಾರೆ.

ಮೇಡಕ್ ಜಿಲ್ಲೆಯಲ್ಲಿ ರೈತರ ಜಮೀನುಗಳನ್ನು ಸಚಿವ ಎಟೆಲಾ ರಾಜೇಂದರ್ ಬಲವಂತವಾಗಿ ಕಬಳಿಸಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಗಳನ್ನು ಹಿಂಪಡೆಯಲಾಗಿದೆ.

ಈ ಖಾತೆಗಳನ್ನು ಕೆ. ಚಂದ್ರಶೇಖರ ರಾವ್ ಅವರೇ ನಿರ್ವಹಿಸಲಿದ್ದು, ಖಾತೆಗಳ ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯಪಾಲರ ಅನುಮತಿ ಪಡೆಯಲಾಗಿದೆ. ಸಚಿವರ ವಿರುದ್ಧ ಕೇಳಿ ಬಂದ ಆರೋಪದ ಬಗ್ಗೆ ಡಿಸಿ ನೇತೃತ್ವದಲ್ಲಿ ತನಿಖೆ ನಡೆಸಲು ಮುಖ್ಯ ಕಾರ್ಯದರ್ಶಿ ರಮೇಶ್ ಕುಮಾರ್ ಅವರಿಗೆ ಸಿಎಂ ಆದೇಶ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...