alex Certify ತಂದೆ ಜನ್ಮದಿನದಂದು ಕೇಕ್​ ತರಲು ಹೋದವನ ಬರ್ಬರ ಹತ್ಯೆ..! ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಜನ್ಮದಿನದಂದು ಕೇಕ್​ ತರಲು ಹೋದವನ ಬರ್ಬರ ಹತ್ಯೆ..! ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ಕೃತ್ಯ

ತಂದೆಯ ಜನ್ಮದಿನಾಚರಣೆಗೆಂದು ಕೇಕ್​ ತರಲು ಬೇಕರಿಗೆ ತೆರಳಿದ್ದ 19 ವರ್ಷದ ಯುವಕನನ್ನ ನಾಲ್ವರು ಸೇರಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಈ ಸಂಬಂಧ ಆರೋಪಿಗಳನ್ನ ಬಂಧಿಸಲಾಗಿದ್ದು ಈ ಕೊಲೆಗೆ ತ್ರಿಕೋನ ಪ್ರೇಮ ಕತೆ ಕಾರಣ ಎಂದು ತಿಳಿದುಬಂದಿದೆ.

ಮೃತ ಯುವಕನನ್ನ ಕುನಾಲ್​ ಎಂದು ಗುರುತಿಸಲಾಗಿದೆ. ಬೇಕರಿಯಿಂದ ಕೇಕ್​ ಖರೀದಿ ಮಾಡಲು ತೆರಳಿದ್ದ ವೇಳೆ ಈತನ ಮೇಲೆ ದಾಳಿ ನಡೆಸಿದ ನಾಲ್ವರು ಯುವಕರು ಕುನಾಲ್​ನನ್ನ ಕೊಲೆಗೈದಿದ್ದಾರೆ. ದಕ್ಷಿಣ ದೆಹಲಿಯ ಅಂಬೇಡ್ಕರ್​ ನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಭಯಂಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕುನಾಲ್​ ಎದೆ, ಬೆನ್ನು ಹಾಗೂ ಹೊಟ್ಟೆಗೆ ದುಷ್ಕರ್ಮಿಗಳು ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಕುನಾಲ್​ನನ್ನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತಾದರೂ ಆತ ಮೃತಪಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕೊಲೆಯಾದ ಕುನಾಲ್ ಹಾಗೂ ಕೊಲೆಗಾರ ಗೌರವ್​ ಒಂದೇ ಹುಡುಗಿಯನ್ನ ಪ್ರೀತಿಸುತ್ತಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ದ್ವೇಷ ಬೆಳೆದಿತ್ತು. ಕೊಲೆ ಮಾಡಲೆಂದೇ ಆರೋಪಿಗಳು ಆನ್​ಲೈನ್​ ಶಾಪಿಂಗ್​ ಮಾರ್ಕೆಟ್​ನಲ್ಲಿ 2 ಚಾಕುಗಳನ್ನ ಆರ್ಡರ್​ ಮಾಡಿದ್ದರು ಎಂಬ ವಿಚಾರ ತನಿಖೆ ವೇಳೆ ಹೊರಬಿದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...