alex Certify ಸೆಕ್ಷನ್ ತಪ್ಪಾದ ಬಳಕೆ ಕಾರಣಕ್ಕೆ ಎಫ್‌ಐಆರ್‌ ವಜಾಗೊಳಿಸಲಾಗದು: ಬಾಂಬೆ ಹೈಕೋರ್ಟ್ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕ್ಷನ್ ತಪ್ಪಾದ ಬಳಕೆ ಕಾರಣಕ್ಕೆ ಎಫ್‌ಐಆರ್‌ ವಜಾಗೊಳಿಸಲಾಗದು: ಬಾಂಬೆ ಹೈಕೋರ್ಟ್ ಮಹತ್ವದ ಆದೇಶ

ಭಾರತೀಯ ದಂಡ ಸಂಹಿತೆಯಲ್ಲಿರುವ ಸೂಕ್ತ ವಿಧಿಗಳನ್ನು ಬಳಸಿ ಸಿದ್ಧಪಡಿಸಿಲ್ಲ ಎಂಬ ಕಾರಣಕ್ಕೆ ಪ್ರಾಥಮಿಕ ಮಾಹಿತಿ ವರದಿ (ಎಫ್‌ಐಆರ್‌) ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.

ತನ್ನ ವಿರುದ್ಧ ಸಲ್ಲಿಸಲಾಗಿದ್ದ ಸುಲಿಗೆ ಪ್ರಕರಣವನ್ನು ವಜಾಗೊಳಿಸಲು ಕೋರಿ ಅರ್ಜಿ ಸಲ್ಲಿಸಿದ್ದ ಮುಂಬಯಿ ನಿವಾಸಿಯೊಬ್ಬರ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ.

ಉದ್ಯಮಿ ರೂಪಿನ್ ಬ್ಯಾಂಕರ್‌ ತಂದೆ ಹೇಮಂತ್‌ ಬ್ಯಾಂಕರ್‌ ಸಲ್ಲಿಸಿದ್ದ ಈ ಅರ್ಜಿಯಲ್ಲಿ, ಆಗಸ್ಟ್‌ 2020ರಂದು ಬಿಲ್ಡರ್‌ ಕೈಲಾಶ್ ಅಗರ್ವಾಲ್‌ ನೀಡಿದ ದೂರಿನ ಅನ್ವಯ ವರ್ಲಿ ಪೊಲೀಸರು ಸುಲಿಗೆ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌‌ ರದ್ದುಪಡಿಸಲು ಸೂಕ್ತವಾಗಿದ್ದು, ಆಸ್ತಿ, ಮೌಲ್ಯಯುತ ವಸ್ತುವಿನ ಡೆಲಿವರಿಯ ಆಪಾದನೆ ಮಾಡದೇ ಇರುವ ಕಾರಣ, ಭಾರತೀಯ ದಂಡ ಸಂಹಿತೆಯ 387ನೇ ಸೆಕ್ಷನ್‌ (ಸುಲಿಗೆ) ತಮ್ಮ ವಿರುದ್ಧ ವಿಧಿಸಲು ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್

“ನಿರ್ದಿಷ್ಟ ವಿಧಿಯೊಂದರ ತಪ್ಪಾದ ಬಳಕೆಯನ್ನೇ ಆಧಾರವಾಗಿಟ್ಟುಕೊಂಡು ಎ‌ಫ್‌ಐಆರ್‌ ವಜಾಗೊಳಿಸಲು ಬರುವುದಿಲ್ಲ. ಎಫ್‌ಐಆರ್‌ನಲ್ಲಿ ಹೇಳಿರುವ ಅಪರಾಧವನ್ನು ಮಾಡಿಯೇ ಇಲ್ಲವೆಂದು ಸಾಬೀತಾದಲ್ಲಿ ಮಾತ್ರವೇ ಹಾಗೆ ಮಾಡಲು ಸಾಧ್ಯ,” ಎಂದು ನ್ಯಾಯಾಧೀಶರಾದ ನಿತಿನ್ ಜಮ್ದಾರ್‌ ಮತ್ತು ಸಾರಂಗ್ ಕೋತ್ವಾಲ್ ಇದ್ದ ವಿಭಾಗೀಯ ಪೀಠ ತಿಳಿಸಿದೆ.

ವಿಜಯ್‌ ಶೆಟ್ಟಿ ಎಂಬ ವ್ಯಕ್ತಿಯೊಬ್ಬರು ಬಿಲ್ಡರ್‌ನನ್ನು ಬೆದರಿಸಿದ ಕಾರಣ ಈ ಪ್ರಕರಣದಲ್ಲಿ ಹೇಮಂತ್ ಬ್ಯಾಂಕರ್‌ ವಿರುದ್ಧದ ಆಪಾದನೆಯು ಕ್ರಿಮಿನಲ್ ನಡೆಯೊಂದನ್ನು ತೋರುತ್ತಿದೆ ಎಂದ ಕೋರ್ಟ್, “ಹೀಗಾಗಿ ಅರಿಯಬಲ್ಲಂಥ ಅಪರಾಧ ಮಾಡಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಎಫ್‌ಐಆರ್‌ ವಜಾಗೊಳಿಸಲು ಬರುವುದಿಲ್ಲ,” ಎಂದಿದೆ.

ತನ್ನೊಂದಿಗೆ ಆರ್ಥಿಕ ವ್ಯವಹಾರ ಹೊಂದಿದ್ದ ರೂಪಿನ್ ಬ್ಯಾಂಕರ್‌, ಬಳಿಕ ಹುಸಿ ಸಹಿಗಳನ್ನು ಬಳಸಿಕೊಂಡು ಬ್ಯಾಂಕ್‌ ಆಫ್ ಬರೋಡಾದ ದುಬಾಯ್ ಶಾಖೆಯಲ್ಲಿ 35 ಕೋಟಿ ರೂಪಾಯಿಗಳನ್ನು ಹಿಂಪಡೆದಿದ್ದಾಗಿ ಬಿಲ್ಡರ್‌ ಅಗರ್ವಾಲ್ ಆರೋಪಿಸಿದ್ದಾರೆ. ಪೊಲೀಸ್‌ ದೂರು ನೀಡದಂತೆ ತಮಗೆ ಬೆದರಿಕೆ ಕರೆಗಳೂ ಬಂದಿದ್ದವು ಎಂದು ಬಿಲ್ಡರ್‌ ದೂರಿನಲ್ಲಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Získejte inspiraci a tipy pro vytváření chutných jídel doma, objevte nové lifestylové triky a naučte se pěstovat zdravé plodiny ve vaší zahradě. S našimi užitečnými články a nápady získáte dovednosti potřebné pro zlepšení kvality života a radost z vaší kuchyně a zahrady. Získejte nejlepší rady a triky od našich odborníků a staničte se mistrem ve vaření, životním stylu a zahradničení. Potraviny, které nejsou vhodné k konzumaci s kávou: Jak se zbavit Neuvěřitelný trik, o kterém vědí pouze ty nejlepší hospodyňky: proč Jak se zbavit čajových usazenin na šálcích Jak se zbavit zápachu z chladničky doma: 5 osvědčených Jak snížit Proč byste neměli házet knedlíky do vroucí vody: nečekaný důvod 5 způsobů, Jak se zbavit Jak efektivně odstranit staré usazeniny Brambory se Jak rychle vyčistit Tipy pro domácnost, kuchařství a zahradničení - články plné užitečných rad a triků, které vám pomohou v každodenním životě. Navštivte náš web pro jedinečné recepty, kreativní nápady a inspiraci pro úspěšnou zahradničení!