alex Certify BIG NEWS: ಮನವೊಲಿಕೆಗೆ ಬಗ್ಗದ ಸಿ.ಪಿ. ಯೋಗೇಶ್ವರ್: ನಾನೇ ಅಭ್ಯರ್ಥಿ ಎಂದು ಪಟ್ಟು ಹಿಡಿದ ಸೈನಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮನವೊಲಿಕೆಗೆ ಬಗ್ಗದ ಸಿ.ಪಿ. ಯೋಗೇಶ್ವರ್: ನಾನೇ ಅಭ್ಯರ್ಥಿ ಎಂದು ಪಟ್ಟು ಹಿಡಿದ ಸೈನಿಕ

ರಾಮನಗರ: ಚನ್ನಪಟ್ಟಣ ವಿಧಾನಭಾ ಕ್ಷೇತ್ರದ ಉಪಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಆಯ್ಕೆ ಕಂಗಂಟಾಗಿ ಪರಿಣಮಿಸಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಿ.ಪಿ.ಯೋಗೇಶ್ವರ್ ಮನವೊಲಿಸಲು ಜೆಡಿಎಸ್ ನಯಕರು ಮಾಡಿರುವ ಯತ್ನ ವಿಫಲವಾದಂತಿದೆ.

ಮನವೊಲಿಕೆಗೆ ಬಗ್ಗದ ಸಿ.ಪಿ.ಯೋಗೇಶ್ವರ್ ನಾನೇ ಸ್ಪರ್ಧೆ ಮಾಡುತ್ತೇನೆ. ಮೈತ್ರಿ ಅಭ್ಯರ್ಥಿಯಾಗಿ ನಾನೇ ಕಣಕ್ಕಿಳಿಯುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶುಕ್ರವರ ರಾತ್ರಿ ಸಿ.ಪಿ.ಯೋಗೇಶ್ವರ್ ಜೊತೆ ಜೆಡಿಎಸ್ ನಾಯಕರು ಸಭೆ ನಡೆಸಿದ್ದರು. ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು. ಮುಖಂಡರ ಮನವೊಲಿಕೆಗೆಸಿ.ಪಿ.ಯೋಗೇಶ್ವರ್ ಸಹಮತ ನೀಡಿಲ್ಲ. ಇದರಿಂದ ಸಭೆ ವಿಫಲವಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ರಾಜ್ಯ ಬಿಜೆಪಿ ಹಾಗೂ ಹೆಚ್.ಡಿ.ಕುಮರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಚರ್ಚೆ ಬಳಿಕ ಚನ್ನಪಟ್ಟಣ ಅಭ್ಯರ್ಥಿ ಯಾರೆಂಬ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ತಿಳಿದುಬಂದಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...