alex Certify BREAKING : ಬಳ್ಳಾರಿ ಸೆಂಟ್ರಲ್ ಜೈಲಿಗೆ ನಟ ದರ್ಶನ್ ‘ಸ್ಟೈಲಿಶ್ ಎಂಟ್ರಿ’ : ಬೆಂಗಾವಲು ವಾಹನ ಸಿಬ್ಬಂದಿಗೆ ನೋಟಿಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬಳ್ಳಾರಿ ಸೆಂಟ್ರಲ್ ಜೈಲಿಗೆ ನಟ ದರ್ಶನ್ ‘ಸ್ಟೈಲಿಶ್ ಎಂಟ್ರಿ’ : ಬೆಂಗಾವಲು ವಾಹನ ಸಿಬ್ಬಂದಿಗೆ ನೋಟಿಸ್..!

ಬೆಂಗಳೂರು : ಬಳ್ಳಾರಿ ಸೆಂಟ್ರಲ್ ಜೈಲಿಗೆ ನಟ ದರ್ಶನ್ ರನ್ನು ಸ್ಟೈಲಿಶ್ ಆಗಿ ಕರೆತಂದ ಬೆಂಗಾವಲು ವಾಹನ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಬ್ರಾಂಡೆಡ್ ಟೀರ್ಟ್, ಕೂಲಿಂಗ್ ಗ್ಲಾಸ್, ಕೈ ಕಡಗ, ಧರಿಸಿ ಸ್ಟೈಲಿಶ್ ಆಗಿ ನಟ ದರ್ಶನ್ ಅವರನ್ನು ಕರೆತಂದ ಹಿನ್ನೆಲೆ ಬೆಂಗಾವಲು ಸಿಬ್ಬಂದಿಗೆ ನೋಟಿಸ್ ನೀಡಿ ಕಾರಣ ಕೇಳಲಾಗಿದೆ ಎಂದು ತಿಳಿದು ಬಂದಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ ಗೆ ರಾಜಾತಿಥ್ಯ ನೀಡಲಾಗುತ್ತಿದ್ದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಟ ದರ್ಶನ್ ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.ಬಿಗಿ ಪೊಲೀಸ್ ಭದ್ರತೆಯಲ್ಲಿ ನಟ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಬಳ್ಳಾರಿ ಜೈಲಿಗೆ ಕರೆತರುತ್ತಿದಂತೆ ಆರೋಪಿ ಹೆಸರು, ಪ್ರಕರಣ ಸೇರಿದಂತೆ ವಿವಿಧ ಮಾಹಿತಿಗಳನ್ನು ದಾಖಲಿಸಿಕೊಂಡ ಜೈಲಧಿಕಾರಿಗಳು ದರ್ಶನ್ ಗೆ ಹೊಸ ಕೈದಿ ನಂಬರ್ ನೀಡಿದ್ದಾರೆ.

ಇಂದು 4:15 ಕ್ಕೆ ಬೆಂಗಳೂರಿನಿಂದ ಹೊರಟ ದರ್ಶನ್ ಮತ್ತು ಪೊಲೀಸರು ಇಂದು 9:50 ರ ಸುಮಾರಿಗೆ ಬಳ್ಳಾರಿ ತಲುಪಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕದ ಮಾರ್ಗ ಬಿಟ್ಟು ಆಂಧ್ರ, ತಿರುವನಂತಪುರಂ ಮಾರ್ಗದ ಮೂಲದ ನಟ ದರ್ಶನ್ ಅವರನ್ನು ಇಂದು ಬಳ್ಳಾರಿಗೆ ಕರೆ ತರಲಾಗಿದೆ

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...