alex Certify BREAKING : ರಾಜ್ಯದಲ್ಲಿ ದಾರುಣ ಘಟನೆ ; ಗರ್ಭಪಾತ ದಂಧೆಗೆ ತಾಯಿ-ಮಗು ಬಲಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ರಾಜ್ಯದಲ್ಲಿ ದಾರುಣ ಘಟನೆ ; ಗರ್ಭಪಾತ ದಂಧೆಗೆ ತಾಯಿ-ಮಗು ಬಲಿ..!

ಬೆಂಗಳೂರು : ಗರ್ಭಪಾತ ದಂಧೆಗೆ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಭ್ರೂಣ ತೆಗೆಯಲು ಸೋನಾಕ್ಷಿ ಎಂಬುವವರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ್ ಆಸ್ಪತ್ರೆಗೆ ಬಂದಿದ್ದರು. ಗರ್ಭಪಾತದ ವೇಳೆ ತೀವ್ರ ರಕ್ತಸ್ರಾವದಿಂದ ಗರ್ಭಿಣಿ ಹಾಗೂ ನಾಲ್ಕು ತಿಂಗಳ ಹೆಣ್ಣು ಭ್ರೂಣ ಮೃತಪಟ್ಟಿದೆ .

ಮಹಾರಾಷ್ಟ್ರದಲ್ಲಿ ಸೋನಾಲಿ ಸ್ಕ್ಯಾನಿಂಗ್ ಮಾಡಿಸಿದ್ದು, ಹೆಣ್ಣು ಮಗು ಎಂದು ತಿಳಿದ ಕೂಡಲೇ ಭ್ರೂಣ ತೆಗೆಯಲು ಬಾಗಲಕೋಟೆ ಜಿಲ್ಲೆ ಮಾಲಿಂಗಪುರ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಅಂತೆಯೇ ಗರ್ಭಪಾತ ಮಾಡಿಸಲಾಗುತ್ತದೆ.ಮೃತ ಪಟ್ಟವರನ್ನು ಸಾಂಗ್ಲಿ ಜಿಲ್ಲೆಯ ಸೋನಾಕ್ಷಿ ಎಂದು ಹೇಳಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭ್ರೂಣ ಹತ್ಯೆ ಹಾಗೂ ಭ್ರೂಣ ಪತ್ತೆ ಕಾನೂನು ಉಲ್ಲಂಘನೆಯಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...