alex Certify ಮೆದುಳಿಗೂ ಆಗಬಹುದು ಆಘಾತ ಇರಲಿ ಎಚ್ಚರ..…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆದುಳಿಗೂ ಆಗಬಹುದು ಆಘಾತ ಇರಲಿ ಎಚ್ಚರ..…!

ಹೃದಯಾಘಾತದಂತೆ ಮೆದುಳಿನ ಆಘಾತವೂ ಹಲವು ಮಂದಿಯ ಪ್ರಾಣಕ್ಕೆ ಎರವಾಗುತ್ತದೆ. ಮೆದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಅಥವಾ ಮೆದುಳಿಗೆ ರಕ್ತ ಸಾಗಿಸುವ ಕೊಳವೆಗಳು ಹಾಳಾಗುವುದರಿಂದ ಮೆದುಳಿನ ಆಘಾತ ಸಂಭವಿಸುತ್ತದೆ.

ಇದರಿಂದ ವ್ಯಕ್ತಿಗೆ ಮಾತನಾಡಲು ಕಷ್ಟವಾಗುತ್ತದೆ, ದೇಹದ ಯಾವುದಾದರೂ ಭಾಗದಲ್ಲಿ ನಿಶ್ಯಕ್ತಿ, ದೃಷ್ಟಿ ಹೀನತೆ, ದೇಹದ ಸಮತೋಲನದಲ್ಲಿ ನಿಯಂತ್ರಣ ಕಳೆದುಕೊಳ್ಳುವುದು ಮತ್ತು ಪ್ರಜ್ಞಾಹೀನ ಸ್ಥಿತಿ ಕಂಡು ಬರಬಹುದು.

ಈ ಸಂದರ್ಭದಲ್ಲಿ ವೈದ್ಯರು ಎಂ.ಆರ್.ಐ. ನಡೆಸುತ್ತಾರೆ. ಔಷಧ ಆರಂಭಿಸುವ ಮುನ್ನ ಆಘಾತಕ್ಕೊಳಗಾದ ವ್ಯಕ್ತಿ ಈ ಲಕ್ಷಣ ಕಂಡು ಬಂದ ಮೊದಲ 4-5 ಗಂಟೆಯೊಳಗೆ ಆಸ್ಪತ್ರೆಗೆ ದಾಖಲಾಗಬೇಕು. ಈ ಅವಧಿಯನ್ನು ‘ಗೋಲ್ಡನ್ ಅವರ್’ ಎಂದು ಕರೆಯುತ್ತಾರೆ. ಹೀಗಾದಾಗ ಮಾತ್ರ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಹಾಗೂ ಔಷಧ ನೀಡಲು ಸಾಧ್ಯ.

ಗ್ರಾಮೀಣ ಭಾಗದ ಜನರೂ ಸೇರಿದಂತೆ ಎಲ್ಲರಿಗೂ ಇದರ ಅರಿವು ಮೂಡುವಂತಾಗಬೇಕು. ಮೆದುಳು ಆಘಾತಕ್ಕೆ ಒಳಗಾದ ವ್ಯಕ್ತಿಗಳನ್ನು ಸರಿಯಾಗಿ ನೋಡಿಕೊಳ್ಳುವುದು ಮತ್ತು ಸೂಕ್ತ ಸಮಯಕ್ಕೆ ಔಷಧಿ ನೀಡುವ ಬಗ್ಗೆ ಎಲ್ಲರಿಗೂ ಮಾಹಿತಿ ದೊರೆತರೆ ಮಾತ್ರ ಇದರಿಂದ ಗುಣಮುಖವಾಗುವುದು ಸಾಧ್ಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se