2025 ರಲ್ಲಿ ಮಹಾ ಕುಂಭಮೇಳ ಆಯ್ತು. ಅದರಲ್ಲಿ 65 ಕೋಟಿ ಜನ ಸೇರಿದ್ರು. ಅಲ್ಲಿ ಪಿಂಟು ಮಹಾರಾ ಅಂತ ಒಬ್ಬ ದೋಣಿಗಳ ಮಾಲೀಕ ಇದ್ದ. ಅವನಿಗೊಂದು ಅದೃಷ್ಟ ಖುಲಾಯಿಸಿತ್ತು.
ಅವನು ಏನು ಮಾಡಿದ ಅಂದ್ರೆ, ತನ್ನ ಹತ್ತಿರ ಇದ್ದ 60 ದೋಣಿಗಳನ್ನ 130ಕ್ಕೆ ಹೆಚ್ಚಿಸಿದ. ಅದಕ್ಕೆ ಬೇಕಾದ ಹಣಕ್ಕೆ ತನ್ನ ಹೆಂಡತಿಯ ಆಭರಣಗಳನ್ನು ಮಾರಿದನಂತೆ. ಆಮೇಲೆ, 45 ದಿನಗಳಲ್ಲಿ, 30 ಕೋಟಿ ರೂಪಾಯಿ ಸಂಪಾದನೆ ಮಾಡಿದ. ಅಂದರೆ, ಒಂದು ದೋಣಿಗೆ 23 ಲಕ್ಷ ರೂಪಾಯಿ ಸಿಕ್ಕಿತು. ದಿನಕ್ಕೆ 50,000-52,000 ರೂಪಾಯಿ ಲಾಭ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಕೂಡಾ ಅವನ ಬಗ್ಗೆ ಮಾತಾಡಿದ್ರು. ಆದರೆ, ಅವನ ಬಗ್ಗೆ ಒಂದು ಕಪ್ಪು ಕಥೆ ಇದೆ. ಅವನ ಮೇಲೆ ಕೊಲೆ, ಸುಲಿಗೆ, ಗಲಾಟೆ ಅಂತ ತುಂಬಾ ಕೇಸುಗಳು ಇವೆ. 2009 ರಲ್ಲಿ ಇಬ್ಬರನ್ನು ಕೊಲೆ ಮಾಡಿದನಂತೆ. ಇತ್ತೀಚೆಗೆ ಬೇರೆ ದೋಣಿಯವರಿಂದ ಹಣ ಸುಲಿಗೆ ಮಾಡಿದನಂತೆ.
ಇವನ ಕುಟುಂಬದ ಕಥೆ ಕೂಡಾ ಹಾಗೆಯೇ ಇದೆ. ಇವನ ತಂದೆ, ಅಣ್ಣ ಕೂಡಾ ರೌಡಿಗಳಾಗಿದ್ರು. ಇವನ ಅಣ್ಣನಂತೂ ದೋಣಿಯಲ್ಲೇ ಕೊಲೆಯಾದ. ಪಿಂಟು ಮಹಾರಾ, ದುಡ್ಡು ಸಂಪಾದನೆ ಮಾಡಿದ್ರೂ, ಅವನ ಹಿಂದಿನ ಕಥೆ ಮಾತ್ರ ಭಯಾನಕವಾಗಿದೆ.