alex Certify BMW ಹಿಟ್ & ರನ್ ಕೇಸ್ ; ಶಿವಸೇನೆ ಉಪನಾಯಕ ಸ್ಥಾನದಿಂದ ‘ರಾಜೇಶ್ ಶಾ’ ವಜಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BMW ಹಿಟ್ & ರನ್ ಕೇಸ್ ; ಶಿವಸೇನೆ ಉಪನಾಯಕ ಸ್ಥಾನದಿಂದ ‘ರಾಜೇಶ್ ಶಾ’ ವಜಾ..!

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜೇಶ್ ಶಾ ಅವರನ್ನು ಶಿವಸೇನೆಯ ಉಪನಾಯಕ ಸ್ಥಾನದಿಂದ ತೆಗೆದುಹಾಕಿದ್ದಾರೆ. ಅವರು ವರ್ಲಿ ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಮಿಹಿರ್ ಶಾ ಅವರ ತಂದೆಯಾಗಿದ್ದಾರೆ.

ಮುಂಬೈ ನಲ್ಲಿ BMW ಕಾರು ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮಾಲೀಕನ ಮಿಹಿರ್ ಶಾ ಅವರನ್ನು ಪೊಲೀಸರು ಬಂಧಿಸಿದ್ದರು. ಮುಂಬೈನಲ್ಲಿ ವರ್ಲಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ, ಮೂರು ದಿನಗಳಿಂದ ತಪ್ಪಿಸಿಕೊಂಡಿದ್ದ ಆರೋಪಿ ಮಿಹಿರ್ ಶಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ನಂತರ ಮಿಹಿರ್ ಶಾ ಪರಾರಿಯಾಗಿದ್ದ. ಆತನ ತಂದೆ ರಾಜೇಶ್ ಶಾ ಮತ್ತು ಕುಟುಂಬ ಚಾಲಕ ರಾಜೇಂದ್ರ ಸಿಂಗ್ ಬಿಡಾವತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಮಿಹಿರ್ ಶಾ ಯಾರು?

23 ವರ್ಷದ ಮಿಹಿರ್ ಶಾ ಸಿಎಂ ಏಕನಾಥ್ ಶಿಂಧೆ ಅವರ ಶಿವಸೇನೆ ರಾಜಕಾರಣಿ ರಾಜೇಶ್ ಶಾ ಅವರ ಪುತ್ರ. . ಘಟನೆಯ ಸಮಯದಲ್ಲಿ, ಮೂವತ್ತರ ಹರೆಯದ ಮಿಹಿರ್ ಶಾ ಮತ್ತು ರಾಜೇಂದ್ರ ಸಿಂಗ್ ಬಿದವತ್ ಬಿಎಂಡಬ್ಲ್ಯು ಕಾರಿನಲ್ಲಿದ್ದರು ಎಂದು ಆರೋಪಿಸಲಾಗಿದೆ. ಘಟನೆಯ ಸಮಯದಲ್ಲಿ ಮಿಹಿರ್ ಶಾ ಚಾಲನೆ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...