alex Certify ವಿದ್ಯಾರ್ಥಿಗಳಿಗೆ ಊಟ ಕೊಡುವ ಯೋಗ್ಯತೆಯೂ ಇಲ್ಲ; ಸಮವಸ್ತ್ರ ಹೊಲಿಸಿ ಕೊಡುವ ತಾಕತ್ತು ಇಲ್ಲ; ಮಜವಾದಿ ಕಾಂಗ್ರೆಸ್ ಸರ್ಕಾರದ್ದು ರೈಲು ಬಿಡುವುದರಲ್ಲಿ ಎತ್ತಿದ ’ಕೈ’; ಬಿಜೆಪಿ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಊಟ ಕೊಡುವ ಯೋಗ್ಯತೆಯೂ ಇಲ್ಲ; ಸಮವಸ್ತ್ರ ಹೊಲಿಸಿ ಕೊಡುವ ತಾಕತ್ತು ಇಲ್ಲ; ಮಜವಾದಿ ಕಾಂಗ್ರೆಸ್ ಸರ್ಕಾರದ್ದು ರೈಲು ಬಿಡುವುದರಲ್ಲಿ ಎತ್ತಿದ ’ಕೈ’; ಬಿಜೆಪಿ ವಾಗ್ದಾಳಿ


ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದೇ ಬಂದದ್ದು ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾದರೆ, ಶಾಲಾ ಮಕ್ಕಳು ತಬ್ಬಲಿಯಾಗಿದ್ದಾರೆ.
ಕುಂದಾಪುರದ ಆಜ್ರಿಯ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಬಸ್ ಸೇವೆ ಪಡೆಯುವ ದುಸ್ಥಿತಿ ಬಂದಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ಬಸ್ಸುಗಳ ಕೊರತೆಯ ಅರಿವಿದ್ದರೂ ಸರ್ಕಾರ ಗೊರಕೆಯೊಡೆಯುತ್ತಾ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.
ವಿದ್ಯಾರ್ಥಿಗಳಿಗೆ ಊಟ ಕೊಡಲೂ ಯೋಗ್ಯತೆ ಇಲ್ಲದ, ಶಾಲಾ ಮಕ್ಕಳಿಗೆ ಸಮವಸ್ತ್ರ ಹೊಲಿಸಿ ಕೊಡುವ ತಾಕತ್ತು ಇಲ್ಲದ ಸಿದ್ದರಾಮಯ್ಯ ನೇತೃತ್ವದ ಮಜವಾದಿ ಸರ್ಕಾರ ರೈಲು ಬಿಡುವುದರಲ್ಲಿ ಎತ್ತಿದ ‘ಕೈ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಆದರೂ, ಮಂತ್ರಿಗಳ ಕಾರು ಖರೀದಿಗೆ ಕೋಟಿ ಕೋಟಿ ಹಣ ಎಲ್ಲಿಂದ ಬರುತ್ತದೆ? ನೀವಾದರು ಉತ್ತರಿಸಿ ಅನಕ್ಷರಸ್ಥ ಶಿಕ್ಷಣ ಸಚಿವ ಸನ್ಮಾನ್ಯ ಮಧು ಬಂಗಾರಪ್ಪನವರೇ? ಎಂದು ಬಿಜೆಪಿ ಟ್ವೀಟ್ ಮೂಲಕ ಗುಡುಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...