alex Certify ಆಪ್ತನ ಕಾರು ಹಿಡಿಯದಂತೆ ಶಾಸಕರ ಶಿಫಾರಸ್ಸು ಪತ್ರ…! ಸೋಶಿಯಲ್ ಮೀಡಿಯಾದಲ್ಲಿ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪ್ತನ ಕಾರು ಹಿಡಿಯದಂತೆ ಶಾಸಕರ ಶಿಫಾರಸ್ಸು ಪತ್ರ…! ಸೋಶಿಯಲ್ ಮೀಡಿಯಾದಲ್ಲಿ ವೈರಲ್

ತಮ್ಮ ಆಪ್ತನ ಕಾರನ್ನು ಹಿಡಿಯಬಾರದು ಹಾಗೂ ತೊಂದರೆ ಕೊಡಬಾರದು ಎಂದು ಶಾಸಕರೊಬ್ಬರು ನೀಡಿರುವ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಶಾಸಕರ ನಡೆಯನ್ನು ನೆಟ್ಟಿಗರು ಖಂಡಿಸುತ್ತಿದ್ದಾರೆ.

ಇಂತಹದೊಂದು ಪತ್ರ ನೀಡಿರುವುದು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ. ತಮ್ಮ ಬೆಂಬಲಿಗ ಬಸವರಾಜ ಅವರಿಗೆ ಈ ಪತ್ರ ನೀಡಿದ್ದು ಇದರಲ್ಲಿ ‘ಶಿರಹಟ್ಟಿ ತಾಲೂಕಿನ ಬೆಳಗಟ್ಟಿಯ ಜಿ. ಬಸವರಾಜ ಎಂಬವರು ನನ್ನ ಮತ ಕ್ಷೇತ್ರಕ್ಕೆ ಒಳಪಟ್ಟಿದ್ದು, ನಮ್ಮ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಹಾಗೂ ನನಗೆ ತುಂಬಾ ಚಿರಪರಿಚಿತರು. ಬಸವರಾಜ ಅವರು ಮಹೇಂದ್ರ ಬೊಲೆರೋ ವಾಹನ ಹೊಂದಿದ್ದು ಇದರ ಸಂಖ್ಯೆ ಎಪಿ 39 ವಿ 3517. ಈ ವಾಹನವನ್ನು ಹಿಡಿಯಬಾರದು. ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು’ ಎಂದು ಈ ಪತ್ರದಲ್ಲಿ ಬರೆಯಲಾಗಿದೆ.

ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಿಮ್ಮ ಬೆಂಬಲಿಗರು ಮಾತ್ರ ನಿಮಗೆ ಮುಖ್ಯವೇ. ಶಾಸಕರ ಆಪ್ತರು ಎಂಬ ಕಾರಣಕ್ಕೆ ಅವರಿಗೆ ಕಾನೂನು ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಇದಾದ ಬಳಿಕ ಸ್ಪಷ್ಟನೆ ನೀಡಿರುವ ರಾಮಣ್ಣ ಲಮಾಣಿ ವಿದ್ಯಾರ್ಥಿನಿಯನ್ನು ಹಾಸ್ಟೆಲ್ ಗೆ ಸೇರಿಸುವ ಕಾರಣ ಹೇಳಿ ಆತ ಪತ್ರ ಪಡೆದಿದ್ದು, ಬಳಿಕ ತನಗೆ ಬೇಕಾದಂತೆ ಬರೆದುಕೊಂಡಿದ್ದಾನೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jak se Jak teplota vody Proč semena papriky neklíčí a jak Vědci objevili nejzdravější sacharidy Vepřový jazyk: Tajemství přípravy lahodné lahůdky Odborník na výživu přináší