alex Certify ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ , ಕೈಲಾಶ್​ ವಿಜಯ್​ ವರ್ಗಿಯಾ ಕಾರಿಗೆ ಕಲ್ಲೆಸತ: ಕಾರ್ಯಕರ್ತರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ , ಕೈಲಾಶ್​ ವಿಜಯ್​ ವರ್ಗಿಯಾ ಕಾರಿಗೆ ಕಲ್ಲೆಸತ: ಕಾರ್ಯಕರ್ತರ ಆಕ್ರೋಶ

2021ರ ಪಶ್ಚಿಮ ಬಂಗಾಳ ಚುನಾವಣಾ ಸಿದ್ಧತೆಗಾಗಿ ಪಕ್ಷದ ಕಾರ್ಯಕರ್ತರನ್ನ ಭೇಟಿಯಾಗಲು ಡೈಮಂಡ್​ ಹಾರ್ಬರ್​ಗೆ ತೆರಳುತ್ತಿದ್ದ ವೇಳೆ ಬಿಜೆಪಿ ಮುಖಂಡರಾದ ಜೆ.ಪಿ ನಡ್ಡಾ ಹಾಗೂ ಕೈಲಾಶ್​ ವಿಜಯ ವರ್ಗಿಯಾ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಲಾಗಿದೆ.

ಪಶ್ಚಿಮ ಬಂಗಾಳದ ಡೈಮಂಡ್​ ಹಾರ್ಬರ್​ಗೆ ತೆರಳುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಬೆಂಗಾವಲು ವಾಹನಕ್ಕೆ ಕಲ್ಲು ತೂರಲಾಗಿದೆ ಎಂದು ಬಂಗಾಳ ಬಿಜೆಪಿ ಮುಖಂಡ ದಿಲೀಪ್​ ಘೋಷ್​ ಮಾಹಿತಿ ನೀಡಿದ್ದಾರೆ.

ಕೈಲಾಶ್​ ವಿಜಯವರ್ಗಿಯವರ ಬೆಂಗಾವಲು ವಾಹನಕ್ಕೂ ಕಲ್ಲು ಎಸೆಯಲಾಗಿದೆ. ಈ ಘಟನೆ ನಡೆಯುವುದಕ್ಕೂ ಮುನ್ನ ಅಂದರೆ ಬುಧವಾರದಂದು ಜೆ.ಪಿ ನಡ್ಡಾ ಭಾಗಿಯಾಗಿದ್ದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ದಿಲೀಪ್​ ಘೋಷ್​ ಭದ್ರತಾ ಕೊರತೆ ಬಗ್ಗೆ ಆರೋಪ ಮಾಡಿದ್ದರು. ಇದಾದ ಬಳಿಕವೂ ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿರೋದ್ರಿಂದ ಪೊಲೀಸರ ಮೇಲೆ ದಿಲೀಪ್​ ಘೋಷ್​ ಟ್ವಿಟರ್​ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

— Kailash Vijayvargiya (Modi Ka Parivar) (@KailashOnline) December 10, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...