alex Certify ಮತ್ತೆ ಶಿವಸೇನೆ-ಬಿಜೆಪಿ ಮೈತ್ರಿ…..? ಕುತೂಹಲ ಹುಟ್ಟಿಸಿದ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಶಿವಸೇನೆ-ಬಿಜೆಪಿ ಮೈತ್ರಿ…..? ಕುತೂಹಲ ಹುಟ್ಟಿಸಿದ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಹೇಳಿಕೆ

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕವೇ ಬಿಜೆಪಿ ಹಾಗೂ ಶಿವಸೇನೆ ನಡುವಿನ ಮೈತ್ರಿ ಮುರಿದು ಬಿದ್ದಿತ್ತು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಶುಕ್ರವಾರ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನೀಡಿರುವ ಹೇಳಿಕೆಯೊಂದು ಮತ್ತೆ ಬಿಜೆಪಿ ಹಾಗೂ ಶಿವಸೇನೆ ಪುರ್ನಮಿಲನವಾಗಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಔರಾಂಗಾಬಾದ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರೌಸಾಹೇಬ್​​ ದಾನ್ವೆ ಸೇರಿದಂತೆ ಹಲವು ನಾಯಕರನ್ನು ಭವಿಷ್ಯದ ಸಹೋದ್ಯೋಗಿಗಳು ಎಂದು ಠಾಕ್ರೆ ಸಂಬೋಧಿಸಿರುವುದೇ ಈ ಊಹಾಪೋಹ ಉಂಟಾಗಲು ಕಾರಣ ಎನ್ನಲಾಗಿದೆ.

ನನ್ನ ಹಿಂದಿನ, ಈಗಿನ ಹಾಗೂ ಮತ್ತೆ ನಾವು ಒಂದಾದರೆ ಭವಿಷ್ಯ ಸಹೋದ್ಯೋಗಿಗಳೇ ಎಂದು ಕಾರ್ಯಕ್ರಮದಲ್ಲಿ ಉದ್ಧವ್​ ಠಾಕ್ರೆ ಸಂಬೋಧಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಹಿರಿಯ ಸಚಿವ ಬಾಳಾಸಾಹೇಬ್ ಥೋರಟ್​ ಹಾಗೂ ಮಹಾರಾಷ್ಟ್ರ ಬಿಜೆಪಿ ನಾಯಕ ಡಾನ್ವೆ ಕೂಡ ಹಾಜರಿದ್ದರು.

ಬಳಿಕ ಮಾಧ್ಯಮದ ಎದುರು ಮಾತನಾಡುವ ವೇಳೆ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ ಠಾಕ್ರೆ, ಹಿಂದಿನ ಹಾಗೂ ಪ್ರಸ್ತುತ ಸಹೋದ್ಯೋಗಿಗಳು ಅಲ್ಲಿ ಇದ್ದುದರಿಂದ ತಾವು ಈ ರೀತಿ ಹೇಳಿದ್ದಾಗಿ ಸಬೂಬು ನೀಡಿದ್ದಾರೆ.

ಎಲ್ಲರೂ ಒಗ್ಗೂಡಿದರೆ, ಅವರು ಸಹ ಭವಿಷ್ಯದ ಸಹೋದ್ಯೋಗಿಗಳಾಗಬಹುದು. ಸಮಯ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಮಾರ್ಮಿಕವಾಗಿ ಮಾತನಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...