ಬೆಂಗಳೂರು : ಯುಗಾದಿ, ರಂಜಾನ್ ಹಬ್ಬದ ಹೊತ್ತಲ್ಲೇ ಪ್ರಯಾಣಿಕರಿಗೆ ಖಾಸಗಿ ಬಸ್ ಗಳು ಶಾಕ್ ನೀಡಿದ್ದು, ಟಿಕೆಟ್ ದರ ಹೆಚ್ಚಳ ಮಾಡಿದೆ.
ರಂಜಾನ್, ಯುಗಾದಿ ಹಬ್ಬ ಇದೆ ಎಂದು ಊರಿಗೆ ಹೊರಡಲು ಸಜ್ಜಾದವರಿಗೆ ಶಾಕ್ ಎದುರಾಗಿದೆ. ಖಾಸಗಿ ಬಸ್ ಗಳಲ್ಲಿ ದುಪ್ಪಟ್ಟು ದರ ಕಲೆಕ್ಷನ್ ಮಾಡಲಾಗುತ್ತಿದೆ. ಆದರೆ ನಾವು ಟಿಕೆಟ್ ದರ 50 ರಿಂದ 60 ರಷ್ಟು ಮಾತ್ರ ಟಿಕೆಟ್ ದರ ಏರಿಕೆ ಮಾಡಿದ್ದೇವೆ . ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಗಳಿಗೆ ಭಾರಿ ಹೊಡೆತ ಬಿದ್ದಿದೆ ಎಂದು ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ.
ಬೆಂಗಳೂರು ಹಾಸನ 463 -1000 ರೂ ಇದ್ದು, ಹಬ್ಬದ ದರ 750-1600 ಆಗಿದೆ. ಬೆಂಗಳೂರು-ಶಿವಮೊಗ್ಗ ಪ್ರಸ್ತುತ ದರ 500-990. ಹಬ್ಬದ ದರ 1199-1800 ಆಗಿದೆ. ಬೆಂಗಖೂರು-ಮಂಗಳೂರು ಪ್ರಸ್ತುತ ದರ 650-1300ರೂ ಇದ್ದು ಹಬ್ಬಕ್ಕಂತ 1200-4500 ರೂ ಏರಿಕೆ ಮಾಡಲಾಗಿದೆ. ಬೆಂಗಳೂರು-ದಾವಣಗೆರೆ ಪ್ರಸ್ತುತ 450-1300 ರೂ ಇದ್ದು, ಹಬ್ಬದ ದರ 750-5500 ಏರಿಕೆ ಮಾಡಲಾಗಿದೆ.