![](https://kannadadunia.com/wp-content/uploads/2021/04/vidhana-soudha-1-800x445-1.jpg)
ಬೆಂಗಳೂರು : ಜಮ್ಮು – ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ. 50,00,000 ( ಐವತ್ತು ಲಕ್ಷ ) ಪರಿಹಾರಧನವನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ. ಸರ್ಕಾರದ ಉಲ್ಲೇಖಿತ ಆದೇಶದ ಮೇರೆಗೆ ಈ ಕೆಳಗೆ ಸಹಿ ಮಾಡಿದವರು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕ್ಯಾಫ್ಟನ್ ಪ್ರಾಂಜಲ್ ಎಮ್.ವಿ. ಇವರು ರೈಫಲ್ಸ್ ಸೇವೆಯಲ್ಲಿದ್ದಾಗ ಜಮ್ಮು ಮತ್ತು ಕಾಶ್ಮೀರದ ರೆಜರಿ ಸೆಕ್ಸರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಉಗ್ರವಾದಿಗಳೊಂದಿಗಿನ ಹೋರಾಟದಲ್ಲಿ ದಿನಾಂಕ 20-11-2023 ರಂದು ಯುದ್ಧ/ಯುದ್ಧದಂತಹ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿರುವ ಹಿನ್ನಲೆಯಲ್ಲಿನ ಇವರ ಅವಲಂಬಿತರಿಗೆ 50 ಲಕ್ಷ ರೂ. (ರೂಪಾಯಿ ಐವತ್ತು ಲಕ್ಷ ಮಾತ್ರ) ಗಳ ಅನುಗ್ರಹ ಪೂರ್ವಕ ಅನುದಾನವನ್ನು ಮಂಜೂರು ಮಾಡಲಾಗಿದೆ.
![](https://kannadadunia.com/wp-content/uploads/2023/12/WhatsApp-Image-2023-12-05-at-06.25.21_e7d1ca31.jpg)