alex Certify BIG NEWS : ಬಳ್ಳಾರಿ ನಗರ ದೇವತೆ ತಲೆ ಮೇಲೆ ಕಾಲಿಟ್ಟ ನಟ ದರ್ಶನ್ ಅಭಿಮಾನಿ : ಭುಗಿಲೆದ್ದ ವಿವಾದ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಬಳ್ಳಾರಿ ನಗರ ದೇವತೆ ತಲೆ ಮೇಲೆ ಕಾಲಿಟ್ಟ ನಟ ದರ್ಶನ್ ಅಭಿಮಾನಿ : ಭುಗಿಲೆದ್ದ ವಿವಾದ..!

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಶೀಘ್ರವೇ ಜೈಲಿನಿಂದ ಬಿಡುಗಡೆಯಾಗಲಿ ಎಂದು ಬಳ್ಳಾರಿಯ ನಗರದೇವತೆ ಕನಕದುರ್ಗಮ್ಮ ದೇವಿಗೆ ಅಭಿಮಾನಿಗಳು ಹೂವಿನ ಹಾರ ಹಾಕಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಈ ವೇಳೆ ದೇಗುಲದ ಸಮೀಪ ಇರುವ ದೇವಿಯ 30 ಅಡಿ ಎತ್ತರದ ಮೂರ್ತಿಗೆ ಹೂವಿನ ಹಾರ ಹಾಕುವ ವೇಳೆ ದೇವಿ ತಲೆ ಮೇಲೆ ಕಾಲಿಟ್ಟಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ. ದರ್ಶನ್ ಅಭಿಮಾನಿ ದೇವಿಯ ತಲೆ ಮೇಲೆ ಕಾಲಿಟ್ಟು ಹೂ ಹಾಕಿದ್ದಾರೆ. ಈ ವಿಡಿಯೋ, ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ದರ್ಶನ್ ಬಿಡುಗಡೆ ಆಗಲಿ ಎಂದು ಅಭಿಮಾನಿಗಳು ಪೂಜೆ ನೆರವೇರಿಸಿದ್ದಾರೆ. ಇತ್ತ ನಟ ದರ್ಶನ್ ಅಭಿನಯದ ಕರಿಯ ಹಾಗೂ ಶಾಸ್ತ್ರಿ ಸಿನಿಮಾ ರಿ ರಿಲೀಸ್ ಆಗಿದ್ದು, ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...