alex Certify BIG NEWS: ACB ದಾಳಿ ವೇಳೆ ಪರಾರಿಯಾದ ಕಂದಾಯ ನಿರೀಕ್ಷಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ACB ದಾಳಿ ವೇಳೆ ಪರಾರಿಯಾದ ಕಂದಾಯ ನಿರೀಕ್ಷಕ

ದಾವಣಗೆರೆ: ಜಮೀನಿನ ಖಾತೆ ಬದಲಾವಣೆಗೆ ಲಂಚ ಕೇಳಿದ್ದ ದಾವಣಗೆರೆ ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಎಸಿಬಿ ದಾಳಿ ವೇಳೆ ಇನ್ನೇನು ಸಿಕ್ಕಿಬೀಳುತ್ತೇನೆ ಎಂದು ಗೊತ್ತಾಗುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಿರುವ ಘಟನೆ ನಡೆದಿದೆ.

ಕಂದಾಯ ನಿರೀಕ್ಷಕ ಸಿದ್ದೇಶ್, ವೈದ್ಯರೊಬ್ಬರ ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅದಾಗಲೇ 35 ಸಾವಿರ ರೂಪಾಯಿ ಲಂಚ ಪಡೆದಿದ್ದ. ಉಳಿದ 15 ಸಾವಿರ ರೂಪಾಯಿ ಲಂಚ ಪಡೆಯಲು ಕಾರಿನಲ್ಲಿ ಆಗಮಿಸಿದ್ದ.

28 ಪತ್ನಿಯರ ಮುಂದೆ 37ನೇ ಮದುವೆಯಾದ ಭೂಪ…!

ಲಂಚ ಪಡೆದು ತೆರಳುವ ವೇಳೆ ಎಸಿಬಿ ಅಧಿಕಾರಿಗಳು ಸಿದ್ದೇಶ್ ಕಾರನ್ನು ಸುತ್ತುವರೆದಿದ್ದಾರೆ. ಆದರೆ ತಪ್ಪಿಸಿಕೊಂಡು ಸಿದ್ದೇಶ್ ಪರಾರಿಯಾಗಿದ್ದಾನೆ. ಅಧಿಕಾರಿಗಳು ಚೇಸ್ ಮಾಡಿಕೊಂಡು ಹೋದರೂ ಸಿದ್ದೇಶ್ ನನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದೀಗ ಸಿದ್ದೇಶ್ ವಿರುದ್ಧ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾವಣಗೆರೆ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಕಂದಾಯ ನಿರೀಕ್ಷಕನಿಗಾಗಿ ಶೋಧ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...