alex Certify BIG NEWS: 500 ಬಾಟಲ್ ಸಿಕ್ಕಿದವನಿಗೆ ಬೇಲ್…..? 20 ಬಾಟಲ್ ಸಿಕ್ಕಿದ್ದಕ್ಕೆ ರೈತ ಜೈಲಿಗೆ; ಎಸ್ ಪಿ ಸಂತೋಷ್ ಬಾಬುಗೆ HDK ತರಾಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 500 ಬಾಟಲ್ ಸಿಕ್ಕಿದವನಿಗೆ ಬೇಲ್…..? 20 ಬಾಟಲ್ ಸಿಕ್ಕಿದ್ದಕ್ಕೆ ರೈತ ಜೈಲಿಗೆ; ಎಸ್ ಪಿ ಸಂತೋಷ್ ಬಾಬುಗೆ HDK ತರಾಟೆ

ರಾಮನಗರ: ಅಕ್ರಮ ಮಧ್ಯ ಮಾರಾಟ ಆರೋಪದಲ್ಲಿ ರೈತನನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಎಸ್ ಪಿ ಸಂತೋಷ್ ಬಾಬುಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

ರೈತನ ಬಂಧನದ ಬಗ್ಗೆ ಜೆಡಿಎಸ್ ಮುಖಂಡರು ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮಾಹಿತಿ ನೀಡುತ್ತಿದ್ದಂತೆ ಎಸ್ ಪಿಗೆ ಕರೆ ಮಾಡಿದ ಕುಮಾರಸ್ವಾಮಿ, ನೀವೇನು ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದೀರಾ? ಚಿಕ್ಕಮಗಳೂರಿನಲ್ಲಿ ನಡೆದಂತೆ ಇಲ್ಲಿ ನಿಮ್ಮ ಆಟಗಳು ನಡೆಯಲ್ಲ. ಹಾಫ್ ಮರ್ಡರ್ ಮಾಡಿದವರ ವಿರುದ್ಧ ನಿಮ್ಮ ಸಿಬ್ಬಂದಿಗೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಈಗ 20 ಬಾಟಲ್ ಮಧ್ಯ ಸಿಕ್ಕಿದ್ದಕ್ಕೆ ರೈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೀರಾ ಇದೆಂತಹ ನ್ಯಾಯ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

500 ಬಾಟಲ್ ಮಧ್ಯ ಮಾರಾಟ ಮಾಡುತ್ತಿದ್ದವನಿಗೆ ಬೇಲ್ ಕೊಟ್ಟು ಕೊಳುಹಿಸಿದ್ದೀರಾ. ಲೈಸೆನ್ಸ್ ಇದ್ದು ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ್ದೀರಾ. ಈಗ 20 ಬಾಟಲ್ ಮಧ್ಯ ಸಿಕ್ಕಿದೆ ಎಂದು ರೈತನೋರ್ವನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೀರಾ ಯಾರ ಪರ ನಿಮ್ಮ ಕೆಲಸ ನಡೆಯುತ್ತಿದೆ? ತಾಲೂಕಿನಲ್ಲಿ ಬೇಕಾದಷ್ಟು ಅಕ್ರಮ ನಡೆಯುತ್ತಿದೆ. ಮೊದಲು ಎಲ್ಲಾ ಅಕ್ರಮ ಮಧ್ಯ ಮಾರಾಟ ನಿಲ್ಲಿಸಿ. ಎಲ್ಲಾ ಅಂಗಡಿಗಳ ಮೇಲೆ ರೇಡ್ ಮಾಡಿ ಎಲ್ಲರನ್ನೂ ಒಳಗೆ ಕಳುಹಿಸ್ರಿ ಅದನ್ನು ಬಿಟ್ಟು ಈ ರೀತಿ ಮಾಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ.

ಚಿಕ್ಕಮಗಳೂರಿನಲ್ಲಿ ನಡೆದಂತೆ ಇಲ್ಲಿ ನಡೆಯಲ್ಲ, ಎಚ್ಚರಿಕೆಯಿಂದ ಕೆಲಸ ಮಾಡದಿದ್ದರೆ ನಾವೂ ಕೂಡ ಕನಕಪುರದವರಂತೆ ಮಾತನಾಡಬೇಕಾಗುತ್ತೆ ಎಂದು ಆವಾಜ್ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...