alex Certify BIG NEWS: ಸುಪಾರಿ ಕೊಟ್ಟು ಮಗನನ್ನೇ ಹತ್ಯೆಗೈದ ಉದ್ಯಮಿ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸುಪಾರಿ ಕೊಟ್ಟು ಮಗನನ್ನೇ ಹತ್ಯೆಗೈದ ಉದ್ಯಮಿ ತಂದೆ

ಹುಬ್ಬಳ್ಳಿ: ಹೆತ್ತ ಮಗನನ್ನೇ ಉದ್ಯಮಿ ತಂದೆ ಬರ್ಬರವಾಗಿ ಹತ್ಯೆ ಮಾಡಿಸಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉದ್ಯಮಿ ಭರತ್ ಜೈನ್ ತನ್ನ ಮಗ ಅಖಿಲ್ ಜೈನ್(30) ನನ್ನು ಸ್ಥಳೀಯ ರೌಡಿಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಅಖಿಲ್ ಮೃತದೇಹ ಕೇಶ್ವಾಪುರ ಬಳಿಯ ತೋಟದ ಮನೆಯಲ್ಲಿ ಪತ್ತೆಯಾಗಿತ್ತು.

48 ಗಂಟೆಯೊಳಗಾಗಿ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಮಗನ ಉಪಟಳ ತಾಳಲಾರದೇ ಸುಪಾರಿ ಕೊಟ್ಟು ಕೊಲ್ಲಿಸಿದ್ದಾಗಿ ಭರತ್ ಜೈನ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಭರತ್ ಜೈನ್ ಹೇಳಿಕೆ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಡಿಸೆಂಬರ್ 3ರಂದು ಮಗ ಕಾಣೆಯಾಗಿದ್ದಾನೆ ಎಂದು ಕೇಶ್ವಾಪುಅರ ಠಾಣೆಯಲ್ಲಿ ಭರತ್ ಜೈನ್ ದೂರು ದಾಖಲಿಸಿ ಹೈಡ್ರಾಮಾ ಮಾಡಿದ್ದ. ಅನುಮಾನದ ಮೇರೆಗೆ ಪೊಲೀಸರು ಭರತ್ ಜೈನ್ ನನ್ನೇ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಇದೀಗ ಸ್ಥಳೀಯ ಹಂತಕರಿಗೆ ಸುಪಾರಿಕೊಟ್ಟು ಮಗನನ್ನು ಕೊಲ್ಲಿಸಿದ್ದಾಗಿ ಬಾಯ್ಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...