alex Certify BIG NEWS: ಸವಾಲಿಗೆ ಕರೆದರೆ ಸುಮ್ಮನಿರಲು ಸಾಧ್ಯವೇ…..? ಅದಕ್ಕೆ ಸಿಎಂ ಎದುರು ವೇದಿಕೆಯಲ್ಲೇ ಪ್ರತಿಭಟಿಸಿದ್ದೇನೆ ಎಂದ ಡಿ.ಕೆ.ಸುರೇಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸವಾಲಿಗೆ ಕರೆದರೆ ಸುಮ್ಮನಿರಲು ಸಾಧ್ಯವೇ…..? ಅದಕ್ಕೆ ಸಿಎಂ ಎದುರು ವೇದಿಕೆಯಲ್ಲೇ ಪ್ರತಿಭಟಿಸಿದ್ದೇನೆ ಎಂದ ಡಿ.ಕೆ.ಸುರೇಶ್

ರಾಮನಗರ: ಸಚಿವ ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ವೇದಿಕೆಯಲ್ಲಿಯೇ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸದ ಡಿ.ಕೆ.ಸುರೇಶ್, ಸಚಿವರಿಂದಲೇ ತಪ್ಪಾಗಿರುವುದು. ವೈಯಕ್ತಿಕವಾಗಿ ನಿಂದಿಸುವ ಮಾತು ಆರಂಭಿಸಿದರು. ಹಾಗಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಸಚಿವ ಅಶ್ವತ್ಥನಾರಾಯಣ ವೇದಿಕೆ ಮೇಲೆ ಮಾತನಾಡುತ್ತಾ ಅನಗತ್ಯವಾಗಿ ಪರೋಕ್ಷವಾಗಿ ಹೇಳಿಕೆಗಳನ್ನು ನೀಡಲಾಂಭಿಸಿದರು. ಸಚಿವರು ಸವಾಲಿಗೆ ಕರೆದರೆ ನಾನು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ವೇದಿಕೆ ಮೇಲೆ ಪ್ರತಿಭಟನೆ ಮಾಡಿದ್ದೇವೆ ಎಂದರು.

ಸರ್ಕಾರಿ ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕ್ರಮ ಎನ್ನುವ ರೀತಿ ಸಚಿವರು ಬಿಂಬಿಸುತ್ತಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನು ನಾವೇ ಮಾಡಿದ್ದೀವಿ. ಅಭಿವೃದ್ಧಿ ಯೋಜನೆಗಳು ನಮ್ಮದೇ ಎಂದು ಸಚಿವರು ಹೇಳುತ್ತಿರುವುದು ಸರಿಯಲ್ಲ. ಪ್ರತಿಮೆ ನಿರ್ಮಾಣಕ್ಕೆ ಸಂಸದರಾಗಿ ಹಣ ಬಿಡುಗಡೆಗೆ ಶ್ರಮಿಸಿದ್ದೇನೆ. ಪ್ರತಿಮೆ ಅನಾವರಣಕ್ಕೂ ತೊಡಕುಗಳುಂಟಾದವು. ಅದನ್ನು ಸಮಿತಿ ಮಾಡಿ ಬಗೆಹರಿಸಿದೆವು. ಜಿಲ್ಲಾ ಪಂಚಾಯತ್ ನಿಂದಲೂ ಹಣದ ನೆರವು ಸಿಕ್ಕಿದೆ. ಕಾರ್ಯಕ್ರಮ ಮಾಡಿ ಉದ್ಘಾಟನೆ ಮಾಡಿದ್ದಾರೆ ಸ್ವಾಗತ. ಆದರೆ ಜನರ ಎದುರು ವೇದಿಕೆ ಮೇಲೆ ಆಕ್ರೋಶ ಭರಿಸುವ ಮಾತನ್ನಾಡುವುದು ಸರಿಯಲ್ಲ. ಅದಕ್ಕೆ ಸಿಎಂ ಎದುರಲ್ಲೇ, ವೇದಿಕೆ ಮೇಲೆ ಉತ್ತರ ನೀಡಿದ್ದೇನೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...