alex Certify BIG NEWS: ಸಮಾಜದ ಶಾಂತಿ ಕದಡುವ ಬದಲು ಈ ಪ್ರಶ್ನೆಗಳಿಗೆ ಉತ್ತರಿಸಿ; ಸಿದ್ದರಾಮಯ್ಯಗೆ ಟಾಂಗ್ ನೀಡಿದ ಬಿಜೆಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಮಾಜದ ಶಾಂತಿ ಕದಡುವ ಬದಲು ಈ ಪ್ರಶ್ನೆಗಳಿಗೆ ಉತ್ತರಿಸಿ; ಸಿದ್ದರಾಮಯ್ಯಗೆ ಟಾಂಗ್ ನೀಡಿದ ಬಿಜೆಪಿ

ಬೆಂಗಳೂರು: ಬಿಜೆಪಿ, ಆರ್.ಎಸ್.ಎಸ್. ಬಗ್ಗೆ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ, ಒಂದೆರಡು ದಿನಗಳ ಕಾಲ ಸಮಾಜದ ಶಾಂತಿ ಕದಡುವ ಹೇಳಿಕೆ ನೀಡುವ ಬದಲು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಪಟ್ಟಿ ನೀಡಿದೆ.

ಡಿಕೆಶಿ ಸಂಪತ್ತು ಹೇಗೆ ಹೆಚ್ಚಿದೆ ?

ಡಿಕೆಶಿ ಬಂಧನ ಏಕಾಯ್ತು ?

ಡಿಕೆಶಿ ಮೇಲಿರುವ ಪ್ರಕರಣಗಳೆಷ್ಟು ?

ಗೋವಿಂದರಾಜ್ ಡೈರಿಯಲ್ಲಿ ಏನಿತ್ತು ?

ಮಹಾದೇವಪ್ಪ ನಿಮ್ಮಿಂದ ದೂರಾದದ್ದೇಕೆ ? ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.

ಒಂದು ಸರ್ಕಾರ ಮರು ಆಯ್ಕೆಯಾಗಿಲ್ಲ ಎಂದಾದರೆ ಅದರ ಕಾರ್ಯಕ್ರಮಗಳು ಜನರಿಗೆ ಸಮ್ಮತವಾಗಿಲ್ಲ ಎಂದರ್ಥ. ನೀವು ನೀಡಿದ ಭಾಗ್ಯ ಸರಣಿ ಕಾರ್ಯಕ್ರಮಗಳು ಹಿಂದುಗಳ ಸರಣಿ ಹತ್ಯೆಯ ರಕ್ತದೋಕುಳಿಯಲ್ಲಿ ತೊಳೆದು ಹೋದವು ಎಂದು ಗುಡುಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...