alex Certify BIG NEWS: ಶಿರಾ ಕ್ಷೇತ್ರಕ್ಕೆ ಬಂದರೆ ಹುಷಾರ್…!; ಸಚಿವ ಮಾಧುಸ್ವಾಮಿಗೆ ಜಯಚಂದ್ರ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಿರಾ ಕ್ಷೇತ್ರಕ್ಕೆ ಬಂದರೆ ಹುಷಾರ್…!; ಸಚಿವ ಮಾಧುಸ್ವಾಮಿಗೆ ಜಯಚಂದ್ರ ಎಚ್ಚರಿಕೆ

ತುಮಕೂರು: ಶಿರಾ ಕ್ಷೇತ್ರದ ವಿಷಯದಲ್ಲಿ ಸಚಿವ ಮಾಧುಸ್ವಾಮಿ ತಲೆ ಹಾಕಬಾರದು, ಕ್ಷೇತ್ರದ ಸುದ್ದಿಗೆ ಬಂದರೆ ಹುಷಾರ್ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಎಚ್ಚರಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಜಯಚಂದ್ರ, ಮಾಧುಸ್ವಾಮಿ ಮಂತ್ರಿಯಾಗಿರಲಿ ಅಥವಾ ಏನೇ ಆಗಿರಲಿ ಶಿರಾ ಕ್ಷೇತ್ರ ವಿಚಾರಕ್ಕೆ ಅವರು ಬರಕೂಡದು. ಮದಲೂರು ಕೆರೆಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ ಅಂದ ಮೇಲೆ ಕ್ಷೇತ್ರಕ್ಕೆ ಕಾಲಿಡುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಮಹಿಳೆ ಬೆಡ್ ರೂಮಿನಲ್ಲಿ ಬರ್ತಿತ್ತು ಹಾವಿನ ಶಬ್ಧ…..! ಒಳಗೆ ಹೋದಾಗ ಕಂಡಿದ್ದೇನು ಗೊತ್ತಾ…?

ನಾವು ಮದಲೂರು ಕೆರೆಗೆ ಹೇಮಾವತಿ ನೀರು ಭಿಕ್ಷೆಯಾಗಿ ಕೇಳುತ್ತಿಲ್ಲ. ಶಿರಾ ಉಪಚುನಾವಣೆ ವೇಳೆ ಬಿ ಎಸ್ ವೈ ಭರವಸೆ ನೀಡಿದ್ದರು. 6 ತಿಂಗಳಲ್ಲಿ ಕೆರೆಗೆ ನೀರು ಹರಿಸುವುದಾಗಿ ಹೇಳಿದ್ದರು. ಆದರೆ ಯಾರ ಶಾಪವೋ ಬಿ ಎಸ್ ವೈ ಸಿಎಂ ಸ್ಥಾನದಿಂದ ಕೆಳಗಿಳಿದರು. ಸಚಿವರು ನೀರು ಹರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕ್ಷೇತ್ರದ ವಿಚಾರದಲ್ಲಿ ಮಾಧುಸ್ವಾಮಿ ತಲೆ ಹಾಕದಿರುವುದು ಒಳಿತು ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...