alex Certify BIG NEWS: ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ತಿಮ್ಮಾಪುರ; ಬಿಜೆಪಿ ಭಾರತವನ್ನು ಯಾವ ದೇಶ ಮಾಡಲು ಹೊರಟಿದೆ ಎಂದು ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ತಿಮ್ಮಾಪುರ; ಬಿಜೆಪಿ ಭಾರತವನ್ನು ಯಾವ ದೇಶ ಮಾಡಲು ಹೊರಟಿದೆ ಎಂದು ಪ್ರಶ್ನೆ

ಬಾಗಲಕೋಟೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತವನ್ನು ಪಾಕಿಸ್ತಾನ ಮಾಡ್ತಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಚಿವ ಆರ್.ಬಿ. ತಿಮ್ಮಾಪುರ ತಿರುಗೇಟು ನೀಡಿದ್ದು, ನೀವೇನು ಮಾಡಿದ್ದು? ಆ ಮಸೀದಿ, ಈ ಮಸೀದಿ ಎಂದು ಓಡಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವರು, ಭಾರತವನ್ನು ಬಿಜೆಪಿಯವರು ಯಾವ ದೇಶ ಮಾಡಲು ಹೊರಟಿದ್ದಾರೆ? ನಾವು ಅಧಿಕಾರಕ್ಕೆ ಬಂದರೆ ಭಾರತವನ್ನು ಪಾಕಿಸ್ತಾನ ಮಾಡುತ್ತಾರೆ ಎಂದು ಯತ್ನಾಳ್ ಹೇಳಿದ್ದಾರೆ. ನಾವ್ಯಾಕೆ ಪಾಕಿಸ್ತಾನ ಮಾಡೋಣ? ಇಂದಿರಾ ಗಾಂಧಿ, ಶಾಸ್ತ್ರಿ ದೇಶ ರಕ್ಷಿಸುವ ಕೆಲಸ ಮಾಡಿದರು. ಶಾಸ್ತ್ರಿಯವರು ಇದ್ದಾಗ ಪಾಕಿಸ್ತಾನವನ್ನು ಸೋಲಿಸಿದರು. ಇಂದಿರಾ ಗಾಂಧಿ ಬಾಂಗ್ಲಾ ವಿರುದ್ಧ ಗೆದ್ದಾಗ ಹೀಗೆಲ್ಲ ಮಾಡಿದ್ರಾ? ಎಂದು ಪ್ರಶ್ನಿಸಿದರು.

ನಮ್ಮ ಯೋಧರನ್ನು ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ ಎಂದರು. ಜನರ ನಡುವೆ ಜಗಳ ಹಚ್ಚಿದ್ದು ಬಿಟ್ಟರೆ ಬಿಜೆಪಿಯವರು ಮಾಡಿದ್ದೇನು? ಎಂದು ಕೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...