alex Certify BIG NEWS: ಮುಂದೊಂದು ದಿನ ನೀವೂ ಕೂಡ ನಮ್ಮ RSS ಅಂತಾ ಹೇಳಬೇಕಾದ ಕಾಲ ಬರುತ್ತೆ; ಶಾಸಕ ಜಮೀರ್ ಅಹ್ಮದ್ ಗೆ ತಿರುಗೇಟು ನೀಡಿದ ಸ್ಪೀಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಂದೊಂದು ದಿನ ನೀವೂ ಕೂಡ ನಮ್ಮ RSS ಅಂತಾ ಹೇಳಬೇಕಾದ ಕಾಲ ಬರುತ್ತೆ; ಶಾಸಕ ಜಮೀರ್ ಅಹ್ಮದ್ ಗೆ ತಿರುಗೇಟು ನೀಡಿದ ಸ್ಪೀಕರ್

ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಆರ್.ಎಸ್.ಎಸ್. ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆದ ಪ್ರಸಂಗ ನಡೆದಿದೆ.

ಕರ್ನಾಟಕ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮೊದಲು ನಾವೆಲ್ಲರೂ ಮನುಷ್ಯರು. ಆಮೇಲೆ ಬಿಜೆಪಿ, ಕಾಂಗ್ರೆಸ್, ಆರ್.ಎಸ್.ಎಸ್. ಎಂಬುದು ಎಂದು ಹೇಳುತ್ತಿದ್ದಂತೆ ಸ್ಪೀಕರ್ ಕಾಗೇರಿ ಅದ್ಯಾಕೆ ನಮ್ಮ ಆರ್.ಎಸ್.ಎಸ್. ಬಗ್ಗೆ ವಿರೋಧ? ಎಂದು ಪ್ರಶ್ನಿಸಿದರು.

ಸ್ಪೀಕರ್ ನಮ್ಮ ಆರ್.ಎಸ್.ಎಸ್. ಎನ್ನುತ್ತಿದ್ದಂತೆ ಮಧ್ಯಪ್ರವೇಶಿಸಿದ ಶಾಸಕ ಜಮೀರ್ ಅಹ್ಮದ್, ಸಭಾಪತಿ ಪೀಠದಲ್ಲಿ ಕುಳಿತು ಅದ್ಯಾಕೆ ನಮ್ಮ ಆರ್.ಎಸ್.ಎಸ್. ಎಂದು ಹೇಳುತ್ತೀರಾ? ಇದು ಸರಿಯಲ್ಲ ಎಂದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ಕಾಗೇರಿ, ಹೌದು ನಮ್ಮ ಆರ್.ಎಸ್.ಎಸ್. ಇಂದಲ್ಲ ನಾಳೆ ನೀವು ಕೂಡ ಆರ್.ಎಸ್.ಎಸ್.ಗೆ ಸೇರುತ್ತೀರಾ. ಮುಂದೆ ನೀವು ಕೂಡ ನಮ್ಮ ಆರ್.ಎಸ್.ಎಸ್. ಅಂತ ಹೇಳಬೇಕಾಗುತ್ತೆ ಎಂದು ಹೇಳಿದರು.

ಚಲಿಸುತ್ತಿದ್ದ ಬಸ್​ನಲ್ಲಿ ಶಾಲಾ ಸಹಪಾಠಿಗಳ ಎಣ್ಣೆ ಪಾರ್ಟಿ : ವಿಡಿಯೋ ವೈರಲ್​ ಬಳಿಕ ಖಾಕಿ ಅಲರ್ಟ್​

ಇದಕ್ಕೆ ಧ್ವನಿಗೂಡಿಸಿದ ಕಂದಾಯ ಸಚಿವ ಆರ್.ಅಶೋಕ್, ನಮ್ಮ ಆರ್.ಎಸ್.ಎಸ್. ಎಂದು ಎಲ್ಲರೂ ಹೇಳಲೇಬೇಕು. ಆರ್.ಎಸ್.ಎಸ್. ಈಗ ಸರ್ವವ್ಯಾಪಿಯಾಗಿದೆ. ದೇಶದ ರಾಷ್ಟ್ರಪತಿ ಆರ್.ಎಸ್.ಎಸ್.ನವರು, ಪ್ರಧಾನಿ ಮೋದಿ, ಮುಖ್ಯಮಂತ್ರಿಗಳು ಕೂಡ ಆರ್.ಎಸ್.ಎಸ್.ನಿಂದ ಬಂದವರು. ಹೀಗಿರುವಾಗ ದೇಶಾದ್ಯಂತ ಆರ್.ಎಸ್.ಎಸ್. ವ್ಯಾಪಿಸಿದೆ. ಅಂದ ಮೇಲೆ ನಮ್ಮ ಆರ್.ಎಸ್.ಎಸ್. ಎನ್ನದೇ ಬೇರೆ ದಾರಿಯಿಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...