alex Certify BIG NEWS: ಮಂಗಳೂರು ಕುಕ್ಕರ್ ಒಡೆದರೆ ಇಡೀ ದೇಶ ಒಡೆಯುತ್ತೆ ಅಂತ ಡಿಕೆಶಿಗೆ ಗೊತ್ತಿಲ್ಲ; ನಳೀನ್ ಕುಮಾರ್ ಕಟೀಲ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಂಗಳೂರು ಕುಕ್ಕರ್ ಒಡೆದರೆ ಇಡೀ ದೇಶ ಒಡೆಯುತ್ತೆ ಅಂತ ಡಿಕೆಶಿಗೆ ಗೊತ್ತಿಲ್ಲ; ನಳೀನ್ ಕುಮಾರ್ ಕಟೀಲ್ ವಾಗ್ದಾಳಿ

ಮುರುಡೇಶ್ವರ: ವೋಟರ್ ಐಡಿ ಹಗರಣವಾಗುತ್ತಿದ್ದಂತೆ ಬಿಜೆಪಿಗರು ಅತ್ತ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಮಾಡಿದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್. ದೇಶ ವಿರೋಧಿಗಳ ಬೆಂಬಲಕ್ಕೆ ಡಿ,ಕೆ.ಶಿವಕುಮಾರ್ ನಿಂತಿದ್ದಾರೆ ಎಂದು ಗುಡುಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಬೆಳಗಾವಿ ಕುಕ್ಕರ್ ಮಂಗಳೂರು ಕುಕ್ಕರ್ ಒಂದೇ ಅಂದುಕೊಂಡಿದ್ದಾರೆ. ಬೆಳಗಾವಿ ಕುಕ್ಕರ್ ಒಡೆದರೆ ಕೇವಲ ಕುಟುಂಬ ಒಡೆಯುತ್ತೆ. ಆದರೆ ಮಂಗಳೂರು ಕುಕ್ಕರ್ ಒಡೆದರೆ ಈಡೀ ದೇಶ ಒಡೆಯುತ್ತದೆ ಅಂತಾ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕುಕ್ಕರ್ ಬಾಂಬ್ ಸ್ಫೋಟದ ಶಂಕಿತ ಉಗ್ರ ಶಾರಿಕ್ ನನ್ನು ತನಿಖೆ ನಡೆಸದೇ ಉಗ್ರ ಎಂದು ಹೇಗೆ ಘೋಷಿಸಿದಿರಿ ಎಂದು ಹೇಳುವ ಮೂಲಕ ಡಿಕೆಶಿ ದೇಶ ವಿರೋಧಿಗಳ ಬೆಂಬಲಕ್ಕೆ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...