alex Certify BIG NEWS: ಬ್ಲಾಕ್ ಫಂಗಸ್ ಗೆ ಔಷಧ ಕೊರತೆ; ಸಮಸ್ಯೆ ಹೆಚ್ಚಿದರೆ ರೋಗಿಗಳ ಜೀವಕ್ಕೆ ಅಪಾಯ; ರಾಜ್ಯ ಸರ್ಕಾರಕ್ಕೆ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ.ರಘುರಾಜ್ ಹೆಗಡೆ ಎಚ್ಚರಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬ್ಲಾಕ್ ಫಂಗಸ್ ಗೆ ಔಷಧ ಕೊರತೆ; ಸಮಸ್ಯೆ ಹೆಚ್ಚಿದರೆ ರೋಗಿಗಳ ಜೀವಕ್ಕೆ ಅಪಾಯ; ರಾಜ್ಯ ಸರ್ಕಾರಕ್ಕೆ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ.ರಘುರಾಜ್ ಹೆಗಡೆ ಎಚ್ಚರಿಕೆ…!

ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದೆ. ರೋಗಿಗಳ ಜೀವವನ್ನೇ ಹಿಂಡುತ್ತಿದೆ. ಔಷಧ ಕೊರತೆಯಿಂದಾಗಿ ಈ ಸಮಸ್ಯೆ ಸೃಷ್ಠಿಯಾಗಿದೆ. ಇದು ಹೀಗೇ ಮುಂದುವರೆದರೆ ರೋಗಿಗಳ ಸಾವು ಖಚಿತ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯ ಡಾ.ರಘುರಾಜ್ ಹೆಗಡೆ ಎಚ್ಚರಿಕೆ ನೀಡಿದ್ದಾರೆ.

ಎಂಪೊಟೆರಿಸನ್ ಬಿ ಔಷಧ ಕೊರತೆಯಿಂದ ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ಸಮಸ್ಯೆಗಳಾಗಿವೆ. ಇದು ಹೀಗೆ ಮುಂದುವರೆದರೆ ರೋಗಿಗಳು ಸಾವನ್ನಪ್ಪುತ್ತಾರೆ. ಬೆಡ್ ಗಳ ಸಮಸ್ಯೆ ಎದುರಾಗಲಿದೆ. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಔಷಧ ತರಿಸಿಕೊಡಬೇಕು, ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದ ರೋಗಿಯ ಒಂದು ಕಣ್ಣನ್ನು ಕಳೆದವಾರ ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದೇವೆ. ಇದೀಗ ಮತ್ತೊಂದು ಕಣ್ಣಿಗೂ ಫಂಗಸ್ ತಗುಲಿದೆ. ಈಗ ಆ ರೋಗಿಯ ಮೆದುಳಿಗೂ ಫಂಗಸ್ ಆವರಿಸಿಕೊಳ್ಳುತ್ತಿದೆ. ಔಷಧ ಕೊರತೆಯೇ ಸಮಸ್ಯೆಗೆ ಕಾರಣವಾಗಿದೆ. ಈ ವಿಷಯವನ್ನು ರೋಗಿಯ ಕುಟುಂಬದವರಿಗೆ ನಾನು ತಿಳಿಸುವುದಾದರೂ ಹೇಗೆ ಎಂದು ಸಂಕಟ ತೋಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...