![](https://kannadadunia.com/wp-content/uploads/2022/11/43698d09-19ab-456b-943d-0a7c9ed1a9e6.jpg)
ಬಿಜೆಪಿ ಶಾಲು ಹಾಕಿಕೊಂಡರೆ ಪಾಪಗಳೆಲ್ಲ ಪರಿಹಾರವಾಗುತ್ತದೆ. ಇದಕ್ಕಾಗಿ ಕಾಶಿಗೆ ಹೋಗಬೇಕಾಗಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಫೈಟರ್, ಸೈಲೆಂಟ್ ಎಲ್ಲಿದ್ದಾರೆ ಎಂಬುದನ್ನು ಪೊಲೀಸರು ಬಿಜೆಪಿಯವರ ಬಳಿ ಕೇಳಿದ್ದಾರೆ ಸಾಕಾಗಿತ್ತು ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಸೇರ್ಪಡೆಯಾದ ತಕ್ಷಣ ಎಲ್ಲರೂ ಪಾವನರಾಗ್ತಾರೆ. ಆ ಪಕ್ಷ ಒಂದು ರೀತಿ ವಾಷಿಂಗ್ ಮಿಷನ್ ಇದ್ದಂತೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.