alex Certify BIG NEWS: ಬಿಜೆಪಿ ಕಲಬೆರಕೆ ಪಕ್ಷ; ಟೆರರಿಸ್ಟ್ ಗಳನ್ನು ಬೆಳೆಸಿದ ಕಾಂಗ್ರೆಸ್ಸಿಗರು ಬಿಜೆಪಿಗೆ ಬಂದಿದ್ದಾರೆ; ಪ್ರಮೋದ್ ಮುತಾಲಿಕ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿ ಕಲಬೆರಕೆ ಪಕ್ಷ; ಟೆರರಿಸ್ಟ್ ಗಳನ್ನು ಬೆಳೆಸಿದ ಕಾಂಗ್ರೆಸ್ಸಿಗರು ಬಿಜೆಪಿಗೆ ಬಂದಿದ್ದಾರೆ; ಪ್ರಮೋದ್ ಮುತಾಲಿಕ್ ವಾಗ್ದಾಳಿ

ಬಾಗಲಕೋಟೆ: ಬಿಜೆಪಿ ಇಂದು ಒರಿಜಿನಲ್ ಬಿಜೆಪಿಯಾಗಿ ಉಳಿದಿಲ್ಲ. ಕಲಬೆರಕೆ ಪಕ್ಷವಾಗಿದೆ. ಇಂದು ಬಿಜೆಪಿಗೆ ಶೇ.60-70ರಷ್ಟು ಜನರು ಕಾಂಗ್ರೆಸ್, ಜೆಡಿಎಸ್ ನಿಂದ ಬಂದಿದ್ದಾರೆ. ಕಮ್ಯೂನಿಸ್ಟರೂ ಬಂದಿದ್ದಾರೆ. ಶೇ.30-40 ಜನರು ಮಾತ್ರ ಬಿಜೆಪಿಯವರು ಪಕ್ಷದಲ್ಲಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಮುತಾಲಿಕ್, ಕಾಂಗ್ರೆಸ್ ನವರಿಗೆ ಹಿಂದುತ್ವ ಇಲ್ಲ. ಕೇವಲ ಲೂಟಿ ಮಾಡುವುದೊಂದೇ ಅವರ ಉದ್ದೇಶ. ಇಲ್ಲಿಯವರೆಗೂ ಕಾಂಗ್ರೆಸ್ ನವರು ಟೆರರಿಸ್ಟ್ ಗಳನ್ನು ಬೆಳೆಸಿದರು. ಅಂಥವರು ಇಂದು ಬಿಜೆಪಿಯಲ್ಲಿದ್ದಾರೆ. ಅವರಿಗೆ ಹಿಂದುತ್ವ, ಧರ್ಮ, ದೇಶ, ಸಂಸ್ಕೃತಿ, ಮಾನ, ಮರ್ಯಾದೆ ಏನೂ ಇಲ್ಲ ಎಂದು ಕಿಡಿಕಾರಿದರು.

BIG NEWS: ಬಿಟ್ ಕಾಯಿನ್ ದಂಧೆ; ಕಾಂಗ್ರೆಸ್ ನವರು ಭಾಗಿಯಾಗಿದ್ದರೆ ಗಲ್ಲಿಗೇರಿಸಲಿ; ಸಿ.ಟಿ. ರವಿಗೆ ಟಾಂಗ್ ನೀಡಿದ ಡಿಕೆಶಿ

ರಾಜ್ಯದಲ್ಲಿ ಮತಾಂತರಗಳು ಹೆಚ್ಚುತ್ತಿವೆ. ವಿಧಾನಸಭೆ ಕಲಾಪದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಈ ವಿಚಾರ ಚರ್ಚೆಗೆ ತಂದಿದ್ದು ಅಭಿನಂದನಾರ್ಹ. ದೇಶದಲ್ಲಿ ಶೇ.99ರಷ್ಟು ಕ್ರಿಶ್ಚಿಯನ್ನರು ಮತಾಂತರಗೊಂಡವರು. ಲಂಬಾಣಿ ತಾಂಡಾಗಳಿಗೆ ಪಾದ್ರಿಗಳು ನುಗ್ಗುತ್ತಿದ್ದಾರೆ. ಅವರನ್ನು ಗೋವಾಗೆ ಕರೆದೊಯ್ದು ಮತಾಂತರ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕಿದೆ. ಈ ನಿಟ್ಟಿನಲ್ಲಿ ನ.12ರಂದು ಸಿಎಂ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...