alex Certify BIG NEWS: ಬಿಜೆಪಿಯ ತಂತ್ರಗಾರಿಕೆಯಂತೆ ನಮ್ಮದೂ ತಂತ್ರಗಾರಿಕೆಯಿದೆ; ಯಾವ ಬಣ ರಾಜಕೀಯವೂ ಇಲ್ಲ ಎಂದ ಡಿ.ಕೆ.ಶಿವಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿಯ ತಂತ್ರಗಾರಿಕೆಯಂತೆ ನಮ್ಮದೂ ತಂತ್ರಗಾರಿಕೆಯಿದೆ; ಯಾವ ಬಣ ರಾಜಕೀಯವೂ ಇಲ್ಲ ಎಂದ ಡಿ.ಕೆ.ಶಿವಕುಮಾರ್

ನವದೆಹಲಿ: ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮಲ್ಲಿ ಯಾವುದೇ ಬಣಗಳಿಲ್ಲ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಬಣ, ಡಿಕೆಶಿ ಬಣ ಎಂಬುದು ಬಿಜೆಪಿ ನಾಯಕರ ಸುಳ್ಳು ಆರೋಪ. ಇಲ್ಲಿ ಇರುವುದು ಒಂದೇ ಅದು ಕಾಂಗ್ರೆಸ್ ಬಣ. ಟಿಕೆಟ್ ವಿಚಾರದಲ್ಲಿಯೂ ಯಾವುದೇ ಪೈಪೋಟಿಗಳಿಲ್ಲ. ಪಕ್ಷಕ್ಕಾಗಿ ದುಡಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ತಿಳಿಸಿದರು.

SBI ಗ್ರಾಹಕರು ನೀವಾಗಿದ್ದರೆ ತಪ್ಪದೆ ಓದಿ ಈ ಸುದ್ದಿ

ಇದೇ ವೇಳೆ ಟಿಕೆಟ್ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಬಿಜೆಪಿಗೆ ಹೇಗೆ ತನ್ನದೇ ತಂತ್ರಗಾರಿಕೆ ಇದೆಯೋ ಹಾಗೇ ನಮ್ಮದೂ ತಂತ್ರಗಾರಿಕೆ ಇದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಎಲ್ಲರನ್ನೂ ಪರಿಗಣಿಸಬೇಕಿದೆ. ಸಂಜೆ ವೇಳೆಗೆ ಅಭ್ಯರ್ಥಿಗಳ ಹೆಸರು ಅಂತಿಮವಾಗಲಿದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...