alex Certify BIG NEWS: ಬಂದ ಪುಟ್ಟ, ಹೋದ ಪುಟ್ಟ; ಕೇಂದ್ರ ತಂಡದಿಂದ ಕಾಟಾಚಾರಕ್ಕೆ ಮಳೆಹಾನಿ ಪರಿಶೀಲನೆ; HDK ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಂದ ಪುಟ್ಟ, ಹೋದ ಪುಟ್ಟ; ಕೇಂದ್ರ ತಂಡದಿಂದ ಕಾಟಾಚಾರಕ್ಕೆ ಮಳೆಹಾನಿ ಪರಿಶೀಲನೆ; HDK ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಠಿಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ, ರೈತರ ಬೆಳೆ, ಜಮೀನು ನೀರುಪಾಲಾಗಿದೆ. ಆದರೆ ಮಳೆಹಾನಿ ಪರಿಶೀಲನೆಗೆ ಬಂದ ಕೇಂದ್ರ ತಂಡ ಕಾಟಾಚಾರಕ್ಕೆ ಪರಿಶೀಲನೆ ನಡೆಸಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ನಿಯಮ 69 ಅಡಿ ರಾಜ್ಯದಲ್ಲಿನ ಅತಿವೃಷ್ಠಿ ಕುರಿತು ವಿಷಯ ಮಂಡಿಸಿದ ಕುಮಾರಸ್ವಾಮಿ, ಕೇಂದ್ರ ತಂಡ ಬೆಳೆಹಾನಿ ಪರಿಶೀಲನೆಗೆ ಬಂದಿತ್ತು. ಆದರೆ ರೈತರ ಹೊಲಗಳಿಗೂ ಭೇಟಿ ನೀಡದೇ ಕಾಟಾಚಾರದ ಪರಿಶೀಲನೆ ಮಾಡಿದೆ ಎಂದು ಕಿಡಿ ಕಾರಿದರು.

ಶಿಗ್ಗಾಂವಿ ತಾಲೂಕಿನಲ್ಲಿ ಬೆಳೆ ಹಾನಿ ಪರಿಶೀಲನೆಗೆ ಎಂದು ಹೋದ ಅಧಿಕಾರಿಗಳು ಅಲ್ಲಿನ ಹೊಲಗಳಿಗೂ ಇಳಿಯದೇ ರಸ್ತೆ ಮೇಲೇಯೇ ನಿಂತು ಪರಿಶೀಲಿಸಿದ್ದಾರೆ. ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ಕೇಂದ್ರ ಅಧಿಕಾರಿಗಳ ತಂಡ ನಡೆದುಕೊಂಡಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲು ಪರಿಹಾರ ಕೊಡಿಸಿ, ಇಲ್ಲವಾದರೆ ವಿಷ ಸೇವಿಸುವ ಪರಿಸ್ಥಿತಿ ಇದೆ ಎಂದು ಹಾವೇರಿ ಜನರು ಮನವಿ ಮಾಡಿದ್ದಾರೆ ಆಗ್ರಹಿಸಿದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kaip išsaugoti miltelius ir palaikyti švarią aplinką: kodėl verta Top 10 maisto produktų, kurie padeda Kenksmingos plaukų dažų sudėties pagrindinė 6 paprasti būdai, kaip išspręsti užsikimšusį klozetą per Kaip tinkamai dozuoti druską: patarimai dėl druskos kiekio ir Pagrindiniai žiedinių kopūstų privalumai: neįtikėtinos naudos