alex Certify BIG NEWS: ಪುನೀತ್ ಅಭಿಮಾನಿ ಹೃದಯಾಘಾತದಿಂದ ಸಾವು; ’ಪುನೀತ ಪರ್ವ’ ನೋಡುತ್ತಿದ್ದಾಗಲೇ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪುನೀತ್ ಅಭಿಮಾನಿ ಹೃದಯಾಘಾತದಿಂದ ಸಾವು; ’ಪುನೀತ ಪರ್ವ’ ನೋಡುತ್ತಿದ್ದಾಗಲೇ ಘಟನೆ

ಬೆಂಗಳೂರು: ಪುನೀತ ಪರ್ವ ಕಾರ್ಯಕ್ರಮ ನೋಡುತ್ತಿದ್ದಾಗಲೇ ಪುನೀತ್ ರಾಜ್ ಕುಮಾರ್ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ನಡೆದಿದೆ.

ಪುನೀತ್ ರಾಜ್ ಕುಮಾರ್ ಅವರ ಕೊನೇ ಚಿತ್ರ ’ಗಂಧದ ಗುಡಿ’ ಸಾಕ್ಷ್ಯ ಚಿತ್ರದ ಪ್ರೀ ರಿಲೀಸ್ ಇವೆಂಟ್ ಪುನೀತ ಪರ್ವ ಕಾರ್ಯಕ್ರಮ ನಿನ್ನೆ ನಡೆದಿತ್ತು. ಮಲ್ಲೇಶ್ವರಂ ನ ಲಿಂಕ್ ರಸ್ತೆಯಲ್ಲಿದ್ದ ಮನೆಯಿಂದ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸುತ್ತಿದ್ದ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಗಿರಿರಾಜ್ ಕಾರ್ಯಕ್ರಮ ನೋಡುತ್ತ ಕಣ್ಣೀರುಡುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಾರ್ಯಕ್ರಮವನ್ನು ನೋಡುತ್ತಾ, ತುಂಬಾ ಭಾವುಕರಾಗಿದ್ದ ಗಿರಿರಾಜ್, ಎಂತಹ ಮನುಷ್ಯ ಸತ್ತೋದ. ಅತಿ ಸಣ್ಣ ವಯಸ್ಸಿನಲ್ಲಿಯೇ ಪುನೀತ್ ಅವರನ್ನು ಕಳೆದುಕೊಂಡೆವು ಎಂದು ಮನೆಯವರೊಂದಿಗೆ ಮಾತನಾಡುತ್ತ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಈ ವೇಳೆ ಶೌಚಾಲಯಕ್ಕೆ ಎಂದು ಹೋದ ಗಿರಿರಾಜ್ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಹೃದಯಾಘಾತದಿಂದ ಗಿರಿರಾಜ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಗಿರಿರಾಜ್, ಪುನೀತ್ ಅವರಿಗೆ ಮುತ್ತಿನ ಹಾರ ಹಾಕಿ ಮನೆಯಲ್ಲಿ ಆರಾಧಿಸುತ್ತಿದ್ದರಂತೆ, ಮೊಬೈಲ್ ನಲ್ಲಿಯೂ ಅಪ್ಪು ಜೊತೆಗಿನ ತನ್ನ ಫೋಟೋವನ್ನು ಹಾಕಿಕೊಂಡಿದ್ದರಂತೆ. ಸದಾ ಅಪ್ಪು ಅವರ ಬಗ್ಗೆಯೇ ಮಾತನಾಡುತ್ತಿದ್ದ ಗಿರಿರಾಜ್ ಪುನೀತ್ ಅಗಲಿಕೆ ಬಳಿಕ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ. ಈಗ ಹೃದಯಾಘಾತದಿಂದ ಮೃತಪಟ್ಟಿರುವುದು ಆಘಾತಕ್ಕೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...