alex Certify BIG NEWS: ನೂರು ಸಿದ್ದರಾಮಯ್ಯನವರು ಬಂದರೂ ಭಯವಿಲ್ಲ; ಮಾಜಿ ಸಿಎಂ ವಿರುದ್ಧ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನೂರು ಸಿದ್ದರಾಮಯ್ಯನವರು ಬಂದರೂ ಭಯವಿಲ್ಲ; ಮಾಜಿ ಸಿಎಂ ವಿರುದ್ಧ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ

ದಾವಣಗೆರೆಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನ ‘ಸಿದ್ದರಾಮೋತ್ಸವ’ ಭಾರಿ ಯಶಸ್ಸು ಕಂಡ ಬಳಿಕ ಬಿಜೆಪಿಗರಿಗೆ ಹೆದರಿಕೆ ಶುರುವಾಗಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಿಡಿ ಕಾರಿರುವ ಸಚಿವ ಗೋವಿಂದ ಕಾರಜೋಳ, ನೂರು ಸಿದ್ದರಾಮಯ್ಯನವರು ಬಂದರೂ ಸಹ ಹೆದರುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಒಬ್ಬರು ಶಾಸಕರಿದ್ದ ಸಂದರ್ಭದಲ್ಲೂ ನಾವು ಎದೆಗುಂದಿಲ್ಲ. ಇದೀಗ ಬಿಜೆಪಿ ವಿಶ್ವಮಟ್ಟದಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್ಸಿಗರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.

ಇನ್ನು ಶೇಕಡಾ 40 ಕಮಿಷನ್ ಕುರಿತಂತೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಕೆಂಪಣ್ಣ ಕಳೆದ 20 ವರ್ಷಗಳಿಂದ ಯಾವ ಕಾಮಗಾರಿ ಮಾಡಿದ್ದಾರೆ ತೋರಿಸಲಿ. ತಮ್ಮ ಆರೋಪದ ಕುರಿತಂತೆ ದಾಖಲೆ ನೀಡಲು ದೆಹಲಿಗೆ ಬರುವಂತೆ ಕರೆದರೂ ಅವರು ಹೋಗಿಲ್ಲ ಎಂದು ವಾಗ್ದಾಳಿ ನಡೆಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kouzlo vody: Jak udělat z akvária skvělou dekoraci Чешский язык: Тест на IQ: найдите 3 стрелки за Co se stane, když kočku zataháte Originální recept